ಕಾರಿನಿಂದ ಇಳಿದು ಓಡೋಡಿ ಬಂದು ಅಷ್ಟೊಂದು ಅವಸರದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿರು ವುದಕ್ಕೆ ಬಹುಶಃ ಕೊನೇ ಗಳಿಗೆಯಲ್ಲಿ ಪಟ್ಟಿ ಬದಲಾಗಬಹುದು ಎಂಬ ಅಳುಕು ಕಾಡಿರಲೂಬಹುದು ಅಥವಾ ಮುಖ್ಯಮಂತ್ರಿಗೆ ಈ ವಿಷಯದಲ್ಲಿ ಮೇಲಿನವರ ಒತ್ತಡವೂ ಇರಬಹುದು. ಕೆಂಪುಗೂಟದ ಕಾರಿನ ವಿಚಾರದಲ್ಲಿ ಈ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಈಗ ಝೀರೊ ಟ್ರಾಫಿಕ್ ವಿಚಾರದಲ್ಲೂ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿದೆ ಎನಿಸುತ್ತದೆ.