ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಜಾತ್ರೆಗಳ ಭರಾಟೆ. ಈ ದೇವತೆಗಳಿಗೆ ಅದ್ದೂರಿ ಪೂಜೆ ಪುನಸ್ಕಾರದೊಂದಿಗೆ ಗಾವು ಎಂಬ ಅನಿಷ್ಟ ಪದ್ಧತಿ ನಡೆಯುತ್ತಿದೆ. ಕುರಿ ಅಥವಾ ಮೇಕೆಯನ್ನು ಜೀವಂತ ತಂದು ದೇವಸ್ಥಾನದ ಅಂಗಳದಲ್ಲಿ ನಿಲ್ಲಿಸುತ್ತಾರೆ. ಈ ಆಚರಣೆಗಾಗಿ ನೇಮಿಸಲಾದ ವ್ಯಕ್ತಿ ಇರುತ್ತಾನೆ. ಅವನೇ ಪೋತರಾಜ. ಅವನನ್ನು ನೋಡಿದರೇ ಭಯವಾಗುತ್ತದೆ.
ಕೈಯಲ್ಲೊಂದು ಕತ್ತಾಳೆನಾರಿನ ದಪ್ಪ ಚಾಟಿ. ಅವನ ಆವೇಶ ಹೆಚ್ಚಿಸಲು ತಮಟೆಯವರ ಭರಾಟೆ ಬಡಿತ. ಲಯಬದ್ಧವಾಗಿ ಕುಣಿಯುತ್ತಾ ಪೋತ ರಾಜ ಚಾಟಿಯಿಂದ ಮೊದಲು ತನ್ನ ದೇಹವನ್ನು ದಂಡಿಸುತ್ತಾನೆ. ತದನಂತರ ಆ ಬಲಿಪ್ರಾಣಿಯನ್ನು ಅವನಿಗೊಪ್ಪಿಸುತ್ತಾರೆ. ಆಗ ಅವನ ಆವೇಶ ಇಮ್ಮಡಿಯಾಗುತ್ತದೆ.
ಪ್ರಾಣಿಯ ಮುಂಗಾಲುಗಳನ್ನು ಹಿಡಿದು, ಚಾಟಿ ಏಟು ಬಾರಿಸುತ್ತಾನೆ. ಆ ಪ್ರಾಣಿಯ ಆರ್ತನಾದ ಕ್ರಮೇಣ ನಿಲ್ಲುತ್ತದೆ, ಅಟ್ಟಹಾಸದಿಂದ ದೇವತೆಗೆ ನಮಿಸಿ ಪ್ರಾಣಿಯ ಕುತ್ತಿಗೆ ಕಚ್ಚಿ ಕಚ್ಚಿ ರಕ್ತಹೀರಿ ಸಾಯಿಸುತ್ತಾನೆ. ಇದು ನಿಜಕ್ಕೂ ದೇವತೆಗೆ ಇಷ್ಟಾನಾ? ಈ ಪ್ರಕ್ರಿಯೆ ನಮ್ಮ ನಗರ ದೇವತೆಗಳ ಹೆಸರಿನಲ್ಲಿ ನಡೆಯುತ್ತದೆ. ಮೂಕಪ್ರಾಣಿ ಬಲಿ ತಪ್ಪಿಸುವವರು ಯಾರೂ ಇಲ್ಲವೇ?