ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರಿಗಿದೆ, ನಮಗೇಕಿಲ್ಲ...

Last Updated 21 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಮೀನುಗಾರರನ್ನು ಕೊಂದ ಇಟಲಿಯ ಇಬ್ಬರು ನಾಗರಿಕರನ್ನು ಭಾರತಕ್ಕೆ ಮರಳಿಸಲು ಆ ದೇಶವು ನಿರಾಕರಿಸಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.

  ಇಲ್ಲಿನ ಜೈಲಿನಲ್ಲಿರುವವರು ಹಬ್ಬ ಆಚರಿಸಲು ವಿದೇಶಗಳಿಗೂ ಹೋಗಿ ಬರಲು ಅವಕಾಶ ಸಿಗುತ್ತದೆ. ಅಥವಾ ಮತದಾನ ಮಾಡಲೂ ತಮ್ಮ ದೇಶಗಳಿಗೆ ಹೋಗಿ ಬರುವಷ್ಟರ ಮಟ್ಟಿಗೆ ನಮ್ಮ ದೇಶವು ಉದಾರವಾದಿಯಾಗಿದೆ. ಹಾಗೆ ನೋಡಿದರೆ, ಭಾರತದಲ್ಲಿ ಜೈಲುಗಳಲ್ಲಿರುವ ಲಕ್ಷಾಂತರ ಮಂದಿ ಚುನಾವಣೆ ದಿನ ಮತದಾನದಿಂದ ವಂಚಿತರಾಗುತ್ತಿದ್ದಾರೆ.

ಅವರು ಮತದಾನ ಮಾಡಲಿಕ್ಕೆ ಅವಕಾಶ ಕೇಳಿದರೂ, ಅನುಮತಿ ಸಿಗದು. ಆದರೆ ಜೈಲುಗಳಲ್ಲಿರುವ ವಿದೇಶೀ ಕೊಲೆ ಅಪರಾಧಿಗಳು ಮಾತ್ರ ತಮ್ಮ ದೇಶಕ್ಕೆ ಹೋಗಿ ಮತದಾನ ಮಾಡಿ ಬರಬಹುದು.

ವಿದೇಶೀಯರಿಗೆ ಮತದಾನಕ್ಕೆ ಹೋಗಿ ಬರಲು ಅವಕಾಶ ನೀಡುವ ಭಾರತದ ಕಾನೂನು, ಭಾರತೀಯರಿಗೇಕೆ ತಮ್ಮ ನೆಲದಲ್ಲಿ ಮತದಾನದ ಅವಕಾಶ ನಿರಾಕರಿಸುತ್ತದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT