ಗೋಹತ್ಯೆ, ನಿಷೇಧ ಕುರಿತ ಸುರೇಶ್ಭಟ್ ತಮ್ಮ ಪತ್ರ (ಪ್ರಜಾವಾಣಿ ವಾ.ವಾ. 8.3.12)ದಲ್ಲಿ ಮಂಡಿಸಿರುವ ವಾದ ಅಸಮರ್ಥನೀಯ. ಕುರಿ, ಕೋಳಿ, ಹಸು, ಪಕ್ಷಿಗಳನ್ನು ನಿಸರ್ಗ (ಆಸ್ತಿಕರಿಗೆ ಭಗವಂತ) ಸೃಷ್ಟಿಸಿರುವುದು ಅವು ಬದುಕಲೆಂದು. ತಿನ್ನಲೆಂದಲ್ಲ. ಸೃಷ್ಟಿಸುವ ಸಾಮರ್ಥ್ಯವಿಲ್ಲದ ಮನುಷ್ಯನಿಗೆ ತಿನ್ನುವ ಅಧಿಕಾರವಿಲ್ಲ. ಅದು ತನ್ನ ಸ್ವಾರ್ಥಕ್ಕಾಗಿ ನಿಸರ್ಗದಿಂದ ಕಸಿದುಕೊಂಡಿದ್ದು. ಈ ಅಮಾನವೀಯತೆಯನ್ನು ವೈಚಾರಿಕತೆಯಿಂದ ಸಮರ್ಥಿಸಿಕೊಳ್ಳಲಾಗದು.