ಚುನಾವಣೆ ವೇಳೆ ಸರ್ಕಾರದ ಅಧಿಕಾರಿಗಳು ರಾಜಕಾರಣಿಗಳ ಕೈ ಗೊಂಬೆಯಂತೆ ವರ್ತಿಸುತ್ತಾರೆ. ಮತದಾರನಿಗೆ ಆಮಿಷ ಒಡ್ಡುವುದು, ಅಕ್ರಮಗಳನ್ನು ಎಸಗುವುದು ಬೇಲಿಯೇ ಎದ್ದು ಹೊಲ ಮೇಯ್ದಂತಿದೆ.
ಇಂತಹ ಎಲ್ಲಾ ಆಟಗಳು ನಿಧಾನವಾಗಿಯಾದರು ಚುನಾವಣಾ ಆಯುಕ್ತರ ಕಣ್ಣಿಗೆ ಬಿದ್ದಿವೆ. ಪಕ್ಷಪಾತಿ ಅಧಿಕಾರಿಗಳಿಗೆ ವರ್ಗಾವಣೆಯ ಕ್ರಮ ಚಾಟಿ ಏಟು ಬೀಸಿದಂತಿದೆ.
ಮತದಾರರ ಚೀಟಿಗಳನ್ನು ಆಯೋಗವೇ ಮನೆ ಬಾಗಿಲಿಗೆ ಹೋಗಿ ಕೊಡುವುದು, ಚೀಟಿ ಸಿಗದಿದ್ದರೆ ಮತಗಟ್ಟೆಯಲ್ಲಿಯೇ ಸಹಾಯ ಕೇಂದ್ರ ಸ್ಥಾಪಿಸುತ್ತಿರುವುದು ಶ್ಲಾಘನೀಯ. ಆಯೋಗವು ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಿ.