ಪಾಪ! ಪಿ. ಚಿದಂಬರಂ ಅವರಿಗೆ ಕಾಫಿ– ಟೀ ಬೆಲೆ ಕೇಳಿ ಆಘಾತವಾಗಿರಬೇಕು. ಸ್ವಾಮಿ, ತಾವು ಹಣಕಾಸು ಮಂತ್ರಿಗಳಾಗಿದ್ದಾಗ ಎಂದಾದರೂ ಹೀಗೆಲ್ಲಾ ಅನಿಸಿದ್ದುಂಟೇ? ಬಡವರ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯುವಂತೆ ಮುಂಗಡ ಪತ್ರ ಮಂಡಿಸಿದಾಗ ಇವೆಲ್ಲ ಗಮನಕ್ಕೆ ಬಂದಿರಲಿಲ್ಲವೇ? ತಾವು ಅಧಿಕಾರದಲ್ಲಿದ್ದಾಗ ಹೇಳುವುದೇ ಒಂದು, ವಿರೋಧ ಪಕ್ಷದಲ್ಲಿ ಕುಳಿತಾಕ್ಷಣ ಹೇಳುವುದೇ ಮತ್ತೊಂದು.