ಅರಾಜಕತೆ ವಿಷಯಕ್ಕೆ ಬಂದರೆ, ಗಾಂಧೀಜಿಯವರ ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹಗಳಂತಹವು ಸ್ವಲ್ಪ ಅರಾಜಕತೆಯನ್ನೇ ಉಂಟುಮಾಡಿದ್ದವು. ಸತ್ಯಾಗ್ರಹಗಳು ಸ್ವಲ್ಪ ಹಾಗೇ. ಅಲ್ಲದೆ ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆ ಮಾಡಬೇಕಾದ ರಾಜನೀತಿಯೇ ಇಲ್ಲದಾಗ ಅಥವಾ ಉಲ್ಟಾ ಹೊಡೆದಾಗ, ‘ಮೃಚ್ಛಕಟಿಕ’ದ ಕಾಲದಿಂದಲೂ ಜನಸಾಮಾನ್ಯರು ಸ್ವಲ್ಪ ವ್ಯಗ್ರರಾಗಿದ್ದಾರೆ. ಅದರಲ್ಲಿ ಅಚ್ಚರಿ ಇಲ್ಲ. ಏನೇ ಇರಲಿ ಹರಿಯದ, ಮುರಿಯದ ‘ಚೂಯಿಂಗ್ ಗಮ್’ ರಾಜಕಾರಣದ ಹೊಂದಾಣಿಕೆಯ ವಿಳಂಬ ನೀತಿಯನ್ನು ಸ್ವಾತಂತ್ರ್ಯ ಬಂದಾಗಿನಿಂದ ಅನುಭವಿಸಿ ಪರಿಣಾಮ ನೋಡಿಯಾಗಿದೆ. ಈಗ ಎ.ಎ.ಪಿ.ಯದು ಒಂದು ನೇರ ಸಂಘರ್ಷದ, ಅಹಿಂಸಾತ್ಮಕವಾದ ಹೊಸಬಗೆ. ಕಾದು ನೋಡೋಣ. ಈಗಲೇ ಕಾಲೆಳೆದು ಹತ್ತರ ಜೊತೆಗೆ ಸೇರಿಸುವುದು ಅದರಲ್ಲೂ ದೆಹಲಿಯ ತರಹದ ಪ್ರದೇಶದಲ್ಲಿ ಬೇಡ ಅನ್ನಿಸುತ್ತದೆ. ಅಲ್ಲವೆ?