<p>ಅವಮಾನ ಮತ್ತು ಆತ್ಮಹತ್ಯೆಯನ್ನು ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಆಧುನಿಕ ಮನಶಾಸ್ತ್ರದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ನ ಪ್ರಕಾರ, ಪ್ರತಿಯೊಬ್ಬರಲ್ಲೂ ಬದುಕುವ ತುಡಿತ ಇರುವಂತೆಯೇ ಸಾಯುವ ತುಡಿತವೂ ಇರುತ್ತದೆ.<br /> <br /> ತೀವ್ರ ಕಷ್ಟ, ನಷ್ಟ, ಸೋಲು, ನಿರಾಶೆ, ಅವಮಾನಗಳಾದಾಗ ಬದುಕುವ ತುಡಿತ ತಗ್ಗಿ ಸಾಯುವ ತುಡಿತ ತೀವ್ರವಾಗುತ್ತದೆ. ಈ ತುಡಿತಕ್ಕೆ ಕುಮ್ಮಕ್ಕು ಕೊಡುವುದು ಖಿನ್ನತೆ.<br /> <br /> ಮೆದುಳಿನಲ್ಲಿ ಡೋಪಮಿನ್, ಸೆರೋಟೊನಿನ್ ಎಂಬ ರಾಸಾಯನಿಕ ನರವಾಹಕಗಳ ಪ್ರಮಾಣ ತಗ್ಗಿ ಖಿನ್ನತೆ ಬರುತ್ತದೆ. ಅದು ನಮ್ಮ ಬದುಕುವ ಛಲವನ್ನೇ ಚಿವುಟಿ ಹಾಕುತ್ತದೆ.<br /> ಎಲ್ಲ ಸಮಸ್ಯೆ, ಸಂಕಟಗಳಿಗೆ ಸಾವೇ ಪರಿಹಾರ ಎಂದು ಸೂಚಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ 70ರಷ್ಟು ಮಂದಿ ಸಾಯುವ ಮೊದಲಿನ ಮೂರು ನಾಲ್ಕು ವಾರಗಳ ಅವಧಿಯಲ್ಲಿ ಖಿನ್ನತೆಗೆ ಒಳಗಾಗಿರುತ್ತಾರೆಂದು ಮನೋವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.<br /> <br /> ಖಿನ್ನತೆಯನ್ನು ಗುರುತಿಸಿ ಔಷಧಿ, ಆಪ್ತ ಸಮಾಲೋಚನೆ, ಆಸರೆ ಇತ್ತು ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಅವಮಾನಿತರು, ಭಗ್ನಪ್ರೇಮಿಗಳು, ಸೋತವರು, ಸಾಲ ಮಾಡಿದವರೆಲ್ಲರೂ ಸಾಯಲು ಹೋಗುವುದಿಲ್ಲ. ಇದರ ಜೊತೆಗೆ ಖಿನ್ನತೆ ಸೇರಿಕೊಂಡರೆ ಅಂತಹವರು ಸಾಯಲು ಸಿದ್ಧರಾಗುತ್ತಾರೆ.ಆದ್ದರಿಂದ ಖಿನ್ನತೆಯನ್ನು ಗುರುತಿಸಿ ನಿಭಾಯಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅವಮಾನ ಮತ್ತು ಆತ್ಮಹತ್ಯೆಯನ್ನು ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ ವಿಶ್ಲೇಷಿಸಿದ್ದಾರೆ. ಆಧುನಿಕ ಮನಶಾಸ್ತ್ರದ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ನ ಪ್ರಕಾರ, ಪ್ರತಿಯೊಬ್ಬರಲ್ಲೂ ಬದುಕುವ ತುಡಿತ ಇರುವಂತೆಯೇ ಸಾಯುವ ತುಡಿತವೂ ಇರುತ್ತದೆ.<br /> <br /> ತೀವ್ರ ಕಷ್ಟ, ನಷ್ಟ, ಸೋಲು, ನಿರಾಶೆ, ಅವಮಾನಗಳಾದಾಗ ಬದುಕುವ ತುಡಿತ ತಗ್ಗಿ ಸಾಯುವ ತುಡಿತ ತೀವ್ರವಾಗುತ್ತದೆ. ಈ ತುಡಿತಕ್ಕೆ ಕುಮ್ಮಕ್ಕು ಕೊಡುವುದು ಖಿನ್ನತೆ.<br /> <br /> ಮೆದುಳಿನಲ್ಲಿ ಡೋಪಮಿನ್, ಸೆರೋಟೊನಿನ್ ಎಂಬ ರಾಸಾಯನಿಕ ನರವಾಹಕಗಳ ಪ್ರಮಾಣ ತಗ್ಗಿ ಖಿನ್ನತೆ ಬರುತ್ತದೆ. ಅದು ನಮ್ಮ ಬದುಕುವ ಛಲವನ್ನೇ ಚಿವುಟಿ ಹಾಕುತ್ತದೆ.<br /> ಎಲ್ಲ ಸಮಸ್ಯೆ, ಸಂಕಟಗಳಿಗೆ ಸಾವೇ ಪರಿಹಾರ ಎಂದು ಸೂಚಿಸುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇ 70ರಷ್ಟು ಮಂದಿ ಸಾಯುವ ಮೊದಲಿನ ಮೂರು ನಾಲ್ಕು ವಾರಗಳ ಅವಧಿಯಲ್ಲಿ ಖಿನ್ನತೆಗೆ ಒಳಗಾಗಿರುತ್ತಾರೆಂದು ಮನೋವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.<br /> <br /> ಖಿನ್ನತೆಯನ್ನು ಗುರುತಿಸಿ ಔಷಧಿ, ಆಪ್ತ ಸಮಾಲೋಚನೆ, ಆಸರೆ ಇತ್ತು ಚಿಕಿತ್ಸೆ ನೀಡಿದರೆ ಆತ್ಮಹತ್ಯೆಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ಅವಮಾನಿತರು, ಭಗ್ನಪ್ರೇಮಿಗಳು, ಸೋತವರು, ಸಾಲ ಮಾಡಿದವರೆಲ್ಲರೂ ಸಾಯಲು ಹೋಗುವುದಿಲ್ಲ. ಇದರ ಜೊತೆಗೆ ಖಿನ್ನತೆ ಸೇರಿಕೊಂಡರೆ ಅಂತಹವರು ಸಾಯಲು ಸಿದ್ಧರಾಗುತ್ತಾರೆ.ಆದ್ದರಿಂದ ಖಿನ್ನತೆಯನ್ನು ಗುರುತಿಸಿ ನಿಭಾಯಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>