ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳಿಗೆ ಬುದ್ಧಿ ಇಲ್ಲವೇ?

Last Updated 12 ಜೂನ್ 2014, 19:30 IST
ಅಕ್ಷರ ಗಾತ್ರ

ದಿನೇ ದಿನೇ ಅತ್ಯಾಚಾರದ ಆರೋಪಗಳು ಎಲ್ಲ ರಾಜ್ಯಗಳಲ್ಲೂ ಹೆಚ್ಚುತ್ತಿವೆ. ಮಹಿಳಾ ಜನಪ್ರತಿನಿಧಿ­ಗಳಾಗಲಿ, ಪುರುಷ ಜನಪ್ರತಿನಿಧಿ­ಗಳಾಗಲಿ  ಇದನ್ನು  ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇವರಿಗೆ ಈ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಡೆಯುವ ಮಾಮೂಲು ಘಟನೆ­ಗಳಂತೆ ಕಾಣಿಸುತ್ತಿರುವುದು ದುರಂತ.  ಮಹಿಳೆಯರನ್ನು  ಭೋಗದ ವಸ್ತುವಿ­ನಂತೆ ಕಾಣುವುದು  ಎಷ್ಟರ ಮಟ್ಟಿಗೆ ಸರಿ?

ಮಹಾರಾಷ್ಟ್ರದ ಗೃಹ ಸಚಿವ ಆರ್.ಆರ್. ಪಾಟೀಲ್  ಅವರು ಅತ್ಯಾಚಾರವನ್ನು ತಡೆಯಲಾಗುವು­ದಿಲ್ಲ ಎಂದು ಹೇಳಿರುವುದು ರಾಜ­ಕಾರಣಿಗಳ ಮನಸ್ಥಿತಿಗೆ ದ್ಯೋತಕ.  ಮಹಿಳೆಯರದ್ದೇ ತಪ್ಪು ಎಂದು ಹೇಳುವ ಇಂತಹ ರಾಜಕಾರಣಿಗಳ ಬಗ್ಗೆ  ನಮ್ಮ ಮೌನಿ ಮಹಿಳಾ ಸಚಿವರು ದನಿ ಎತ್ತುತ್ತಿಲ್ಲ.

– ಬಾಳಪ್ಪ ತಾಳಕೇರಿ
ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT