ರಾಜ್ಯ ಸರ್ಕಾರ ನಡೆಸಿದ ಜಾತಿ ಸಮೀಕ್ಷೆ ಹೊರಬೀಳುವ ಹೊಸ್ತಿಲಲ್ಲೆ ಸಮೀಕ್ಷೆ ಬೇಕಿತ್ತೇ ಬೇಡವೇ ಎನ್ನುವ ಚರ್ಚೆಗಳು ಆರಂಭವಾಗಿವೆ. ಸಾಮಾಜಿಕ ನ್ಯಾಯ ಕೊಡಿಸುತ್ತೇವೆ ಎಂದು ಹೇಳಿಕೊಂಡು ಸಮೀಕ್ಷೆ ನಡೆಸಿರುವ ಸರ್ಕಾರ ಹಾಗೇ ನಡೆದುಕೊಂಡರೆ ಸ್ವಾಗತಾರ್ಹ. ಆದರೆ ಅದನ್ನು ರಾಜಕೀಯವಾಗಿ ಬಳಸಿಕೊಂಡರೆ ಖಂಡಿಸಲೇ ಬೇಕಾಗುತ್ತದೆ.
ಸಮೀಕ್ಷೆ ಸಮಾಜವನ್ನು ಒಡೆಯುತ್ತದೆ ಎಂಬ ಕೆಲವರ ಹೇಳಿಕೆಗಳು ಜನರನ್ನು ಗೊಂದಲಕ್ಕೀಡು ಮಾಡಿವೆ. ಸಮೀಕ್ಷೆಯಿಂದ ಜಾತಿ ರಾಜಕೀಯ ಮಾಡದೆ ಸಾಮಾಜಿಕ ನ್ಯಾಯ ಸಿಗುವಂತಾದರೆ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಿದಂತಾಗುತ್ತದೆ.