ಜ್ಯೋತಿಷಕ್ಕೆ ಟಿ.ವಿ. ಮಾಧ್ಯಮ ಹೆಚ್ಚು ಪ್ರಾಧಾನ್ಯ ಕೊಡುತ್ತಿರುವ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಬಾಹ್ಯಾಕಾಶ ವಿಜ್ಞಾನಿ ಡಾ. ಯು.ಆರ್. ರಾವ್ ಅವರು ವ್ಯಕ್ತಪಡಿಸಿರುವುದು ಅತ್ಯಂತ ಶ್ಲಾಘನೀಯ.
ಭವಿಷ್ಯ ಪ್ರಸಾರ ಕುರಿತು ಡಾ. ಯು. ಆರ್. ರಾವ್ ಅವರಿಗೆ ಮಾತ್ರವಲ್ಲ, ಹೆಚ್ಚಿನ ನಾಗರಿಕರಿಗೂ ಅಸಮಾಧಾನವಿದೆ.
ವೈಜ್ಞಾನಿಕವಾಗಿ ಚಿಂತನೆಗೆ ಹಚ್ಚುವ, ಮುಖ್ಯವಾಗಿ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತಹ ವಿಷಯಗಳ ಬಗ್ಗೆ ಪ್ರತಿದಿನ ಉತ್ತಮ ಹಾಗೂ ಆರೋಗ್ಯಕರವಾದ ಕಾರ್ಯಕ್ರಮಗಳನ್ನು ಟಿವಿ ಮಾಧ್ಯಮ ಪ್ರಸಾರ ಮಾಡಲಿ.