<p>ತ್ಯಾಗರಾಜನಗರ ಗಣೇಶ ಮಂದಿರ ರಸ್ತೆಗೆ ಟಾರ್ ಹಾಕುವ ಬಗ್ಗೆ ಸುಮಾರು 3 ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಜೆಲ್ಲಿಯನ್ನು ರಸ್ತೆಗೆ ಹಾಕಿ ಬಿಡಲಾಗಿದೆ. <br /> <br /> ಈ ಹಿಂದೆ ನಲ್ಲಿ ನೀರಿನ ಸಂಪರ್ಕ ಕೊಡುವುದಕ್ಕಾಗಿ ರಸ್ತೆ ಅಗೆದು ಪೈಪುಗಳನ್ನು ಜೋಡಿಸಿದ್ದರು. ಇದರ ಬೆನ್ನಲ್ಲೇ ಪ್ರತಿಯೊಂದು ಮನೆಯವರು ಮತ್ತೆ ರಸ್ತೆ ಅಗೆದು ನೀರಿನ ಸಂಪರ್ಕ ತೆಗೆದುಕೊಂಡರು. ಇದು ನಡೆದು ಸುಮಾರು ಒಂದೂವರೆ ವರ್ಷ ಆಗಿದೆ. ರಸ್ತೆ ಅಗೆದ ಗುಂಡಿಗಳಿಗೆ ಜಲ್ಲಿ ಹಾಕಿ 3 ತಿಂಗಳು ಆಗಿದೆ. ಆದರೆ ಇದುವರೆಗೂ ಇದಕ್ಕೆ ಟಾರ್ ಬಿದ್ದಿಲ್ಲ.<br /> <br /> ಇನ್ನು ಒಳಚರಂಡಿ ದುರಸ್ತಿಗೆ ಪೈಪುಗಳನ್ನು ತಂದು ಸುಮಾರು ಒಂದೂವರೆ ತಿಂಗಳ ಕೆಳಗೆ ರಸ್ತೆ ಅಕ್ಕಪಕ್ಕಗಳಲ್ಲಿ ಸಂಗ್ರಹಿಸಿದ್ದಾರೆ. ಪೈಪುಗಳು ಮಾತ್ರ ಬಿಸಿಲಿನಲ್ಲಿ ಒಣಗುತ್ತಾ ಇವೆ. ಅವುಗಳನ್ನು ಜೋಡಿಸಲು ಮುಹೂರ್ತ ಯಾವಾಗ ಬರುತ್ತದೋ ಗೊತ್ತಾಗುತ್ತಿಲ್ಲ.<br /> <br /> ಇದಲ್ಲದೆ ಇದೇ ರಸ್ತೆಯ ಮನೆಯೊಂದರ ಪೈಪ್ ಒಡೆದು ಹೊಲಸು ನೀರು ಚರಂಡಿಗೆ ಸೇರುತ್ತಿದೆ. ಮ್ಯಾನ್ಹೋಲ್ಗಳು ಮುಚ್ಚಿ, ಸಹಿಸಲು ಅಸಾಧ್ಯವಾದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಪೈಪು ಒಡೆದು ಹೊಲಸು ನೀರು ಚರಂಡಿಗೆ ಬರುತ್ತಿರುವುದನ್ನು ಪಾಲಿಕೆ ಸಿಬ್ಬಂದಿ ಕೆಲವು ದಿವಸಗಳ ಹಿಂದೆ ಆ ಮನೆಯವರಿಗೆ ತಿಳಿಸಿದರೂ, ಅದು ನಮ್ಮ ಮನೆಯದಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಾ ಸುಮ್ಮನಿದ್ದಾರೆ. ಈ ದುರ್ವಾಸನೆಯಿಂದ ಈ ರಸ್ತೆಯಲ್ಲಿ ಓಡಾಡುವರು, ಅಕ್ಕಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮನೆಯ ಬಾಗಿಲುಗಳನ್ನು, ಕಿಟಕಿಗಳನ್ನೂ ತೆಗೆಯುವಂತಿಲ್ಲ. ಇದು ರೋಗಗಳಿಗೆ ಕಾರಣವಾಗುತ್ತಿದೆ.<br /> <br /> ಸಂಬಂಧಪಟ್ಟವರು ಇತ್ತ ಗಮನಹರಿಸಿ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆಂದು ನಂಬಿರುತ್ತೇನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತ್ಯಾಗರಾಜನಗರ ಗಣೇಶ ಮಂದಿರ ರಸ್ತೆಗೆ ಟಾರ್ ಹಾಕುವ ಬಗ್ಗೆ ಸುಮಾರು 3 ತಿಂಗಳ ಹಿಂದೆ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಜೆಲ್ಲಿಯನ್ನು ರಸ್ತೆಗೆ ಹಾಕಿ ಬಿಡಲಾಗಿದೆ. <br /> <br /> ಈ ಹಿಂದೆ ನಲ್ಲಿ ನೀರಿನ ಸಂಪರ್ಕ ಕೊಡುವುದಕ್ಕಾಗಿ ರಸ್ತೆ ಅಗೆದು ಪೈಪುಗಳನ್ನು ಜೋಡಿಸಿದ್ದರು. ಇದರ ಬೆನ್ನಲ್ಲೇ ಪ್ರತಿಯೊಂದು ಮನೆಯವರು ಮತ್ತೆ ರಸ್ತೆ ಅಗೆದು ನೀರಿನ ಸಂಪರ್ಕ ತೆಗೆದುಕೊಂಡರು. ಇದು ನಡೆದು ಸುಮಾರು ಒಂದೂವರೆ ವರ್ಷ ಆಗಿದೆ. ರಸ್ತೆ ಅಗೆದ ಗುಂಡಿಗಳಿಗೆ ಜಲ್ಲಿ ಹಾಕಿ 3 ತಿಂಗಳು ಆಗಿದೆ. ಆದರೆ ಇದುವರೆಗೂ ಇದಕ್ಕೆ ಟಾರ್ ಬಿದ್ದಿಲ್ಲ.<br /> <br /> ಇನ್ನು ಒಳಚರಂಡಿ ದುರಸ್ತಿಗೆ ಪೈಪುಗಳನ್ನು ತಂದು ಸುಮಾರು ಒಂದೂವರೆ ತಿಂಗಳ ಕೆಳಗೆ ರಸ್ತೆ ಅಕ್ಕಪಕ್ಕಗಳಲ್ಲಿ ಸಂಗ್ರಹಿಸಿದ್ದಾರೆ. ಪೈಪುಗಳು ಮಾತ್ರ ಬಿಸಿಲಿನಲ್ಲಿ ಒಣಗುತ್ತಾ ಇವೆ. ಅವುಗಳನ್ನು ಜೋಡಿಸಲು ಮುಹೂರ್ತ ಯಾವಾಗ ಬರುತ್ತದೋ ಗೊತ್ತಾಗುತ್ತಿಲ್ಲ.<br /> <br /> ಇದಲ್ಲದೆ ಇದೇ ರಸ್ತೆಯ ಮನೆಯೊಂದರ ಪೈಪ್ ಒಡೆದು ಹೊಲಸು ನೀರು ಚರಂಡಿಗೆ ಸೇರುತ್ತಿದೆ. ಮ್ಯಾನ್ಹೋಲ್ಗಳು ಮುಚ್ಚಿ, ಸಹಿಸಲು ಅಸಾಧ್ಯವಾದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಪೈಪು ಒಡೆದು ಹೊಲಸು ನೀರು ಚರಂಡಿಗೆ ಬರುತ್ತಿರುವುದನ್ನು ಪಾಲಿಕೆ ಸಿಬ್ಬಂದಿ ಕೆಲವು ದಿವಸಗಳ ಹಿಂದೆ ಆ ಮನೆಯವರಿಗೆ ತಿಳಿಸಿದರೂ, ಅದು ನಮ್ಮ ಮನೆಯದಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಾ ಸುಮ್ಮನಿದ್ದಾರೆ. ಈ ದುರ್ವಾಸನೆಯಿಂದ ಈ ರಸ್ತೆಯಲ್ಲಿ ಓಡಾಡುವರು, ಅಕ್ಕಪಕ್ಕದ ಮನೆಯವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಮನೆಯ ಬಾಗಿಲುಗಳನ್ನು, ಕಿಟಕಿಗಳನ್ನೂ ತೆಗೆಯುವಂತಿಲ್ಲ. ಇದು ರೋಗಗಳಿಗೆ ಕಾರಣವಾಗುತ್ತಿದೆ.<br /> <br /> ಸಂಬಂಧಪಟ್ಟವರು ಇತ್ತ ಗಮನಹರಿಸಿ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆಂದು ನಂಬಿರುತ್ತೇನೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>