ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಗಡಿಭಾಗದ ಗ್ರಾಮ ಊಳೂರು ಡೆಂಗೆಯಿಂದ ತತ್ತರಿಸಿದ ವರದಿಯಾಗಿದೆ. ಕಳೆದ ಒಂದು ತಿಂಗಳಿಂದಲೂ ಗ್ರಾಮದ ಪ್ರತಿ ಕುಟುಂಬಗಳೂ ಜ್ವರದಿಂದ ಬಳಲುತ್ತಿವೆ.
ಗ್ರಾಮದ 60ಕ್ಕೂ ಹೆಚ್ಚಿನ ಜನರು ಬಳ್ಳಾರಿಯ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಆರೋಗ್ಯ ಇಲಾಖೆಯು ಈ ಊರಿನಲ್ಲಿ ಚಿಕಿತ್ಸಾ ಘಟಕವನ್ನು ತೆರೆದು ಡೆಂಗೆಯನ್ನು ತಡೆಯಬೇಕಾಗಿದೆ.