ಅವರು, ಪೊಲೀಸ್ ಇಲಾಖೆಯಲ್ಲಿ ಮಹತ್ವದ ಹುದ್ದೆಗಳನ್ನು ನಿರ್ವಹಿಸಿದವರು. ಅಂತಹವರು, ‘ಯಾರಾದರೂ ಮಹಿಳೆಯ ಮೇಲೆ ದೌರ್ಜನ್ಯ ಎಸಗಲು ಬಂದರೆ ಮಹಿಳೆ ಸುಮ್ಮನೇ ಶರಣಾಗಿಬಿಡಬೇಕು. ಕೊಲೆಯಾಗುವುದನ್ನು ತಪ್ಪಿಸಿಕೊಳ್ಳಬೇಕು...’ ಮುಂತಾಗಿ ಹೇಳಿರುವುದು ಅವರ ಮನಸ್ಥಿತಿಯನ್ನು ತೋರುತ್ತದೆ. ಅನ್ಯಾಯವನ್ನು ಎದುರಿಸುವ ಶಕ್ತಿ–ಯುಕ್ತಿಗಳನ್ನು ಮಹಿಳೆಯರಿಗೆ ತಿಳಿಸಬೇಕಾದವರು, ಈ ರೀತಿ ಹೇಡಿಗಳಾಗಿ ಎಂದು ಹೇಳಿರುವುದು ಶೋಚನೀಯ. ಭಾರತೀಯ ಮಹಿಳೆ ಸಹನೆಯ ಸಾಕಾರಮೂರ್ತಿ ಎಂಬುದು ನಿಜ. ಆದರೆ, ಅತ್ಯಾಚಾರ ಎಸಗುವವರಿಗೆ ‘ಕಾಳಿ’ ಆಗುವಳೆಂಬುದನ್ನು ಸಾಂಗ್ಲಿಯಾನ ತಿಳಿಯಬೇಕು.