ಮಠಕ್ಕೆ ಭಕ್ತರೇ ಆಸ್ತಿ, ಭಕ್ತರೇ ಸರ್ವಸ್ವ, ಭಕ್ತರೇ ಜೀವಾಳವೆನ್ನುವ ಭಾವನೆಯೊಂದಿಗೆ ಅನೇಕ ಮಠಗಳು ಸಾಮಾಜಿಕ ಸೇವೆಗಳಲ್ಲಿ ತೊಡಗಿವೆ. ರಾಜಕಾರಣಿಗಳು ಮಾಡದ ಕಾರ್ಯಗಳನ್ನು ಮಠಗಳು ಮಾಡುತ್ತಿರುವುದರಿಂದಲೇ ಇನ್ನೂ ಮನುಷ್ಯ ಸಂಬಂಧಗಳು ಉಳಿದಿವೆ. ರಾಜಕಾರಣಿಗಳಂತೂ ಒಡೆದು ಆಳುವುದೇ ರಾಜಕಾರಣ ಎಂದು ಭಾವಿಸಿದ್ದಾರೆ. ಮೊದಲು ಇದನ್ನು ನಿಲ್ಲಿಸಬೇಕು. ಆರೋಪ- ಪ್ರತ್ಯಾರೋಪಗಳಲ್ಲಿ ಅವರು ಬಳಸುವ ಕೀಳುಮಟ್ಟದ ಪದಗಳನ್ನು ಕೇಳಿ ಮತದಾರರು ತಲೆ ತಗ್ಗಿಸುವಂತಾಗಿದೆ.