<p>ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರರ ಬಲಿದಾನದಿಂದ ಮೂಢನಂಬಿಕೆ ನಿಷೇಧ ಕಾನೂನು ಅನುಷ್ಠಾನಗೊಂಡಿತು. ಅವರು ಜೀವಂತವಿದ್ದಾಗ ಅಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್- ಎನ್ಸಿಪಿ ಸರ್ಕಾರ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದುದರಿಂದ, ಏನಾದರೊಂದು ನೆಪ ಹೇಳಿ ಮಸೂದೆ ಅಂಗೀಕರಿಸುವುದನ್ನು ಮುಂದೂಡುತ್ತಲೇ ಬಂದಿತ್ತು.<br /> <br /> ಆದರೆ ದಾಭೋಲ್ಕರರ ಹತ್ಯೆ ನಂತರ ಅವರ ಶಿಷ್ಯರು, ಅಭಿಮಾನಿಗಳು ಹಾಗೂ ಸಹವರ್ತಿಗಳು ಹೇರಿದ ಭಾರಿ ಒತ್ತಡದಿಂದ ಸರ್ಕಾರ ಮಸೂದೆ ಅಂಗೀಕರಿಸುವ ಅನಿವಾರ್ಯ ಉಂಟಾಯಿತು. ಹೀಗೆ ದಾಭೋಲ್ಕರರ ಬಲಿದಾನ ಕೊನೆಗೂ ವ್ಯರ್ಥವಾಗಲಿಲ್ಲ.<br /> <br /> ಅದೇ ರೀತಿ ಡಾ. ಎಂ.ಎಂ.ಕಲಬುರ್ಗಿಯವರ ಬಲಿದಾನವೂ ವ್ಯರ್ಥವಾಗದಿರಲಿ. ಮೂಢನಂಬಿಕೆ ನಿಷೇಧ ಕಾಯ್ದೆ ಕರ್ನಾಟಕದಲ್ಲೂ ಅನುಷ್ಠಾನವಾಗುವಂತೆ ಕಲಬುರ್ಗಿಯವರ ಅಭಿಮಾನಿಗಳಾಗಿರುವ ಸಮಸ್ತ ಕನ್ನಡಿಗರೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿ.<br /> <br /> ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರವೂ ಮೃದು ಹಿಂದುತ್ವ ನೀತಿ ಅನುಸರಿಸುತ್ತಿರುವುದರಿಂದ ಈ ಕಾಯ್ದೆಯ ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ ಅದು ಒಪ್ಪಲಿಕ್ಕಿಲ್ಲ. ಆದರೆ ಈಗ ಪ್ರೊ. ಕಲಬುರ್ಗಿಯವರ ಹತ್ಯೆಯಿಂದಾಗಿ ಪರಿಸ್ಥಿತಿ ಕಾವೇರಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆ ಅನುಷ್ಠಾನಗೊಳಿಸುವ ಸುಸಮಯ ಒದಗಿ ಬಂದಿದೆ. ಈ ಸಂದರ್ಭ ಕೈತಪ್ಪಲು ಬಿಡಬಾರದು. ಇದುವೇ ಕಲಬುರ್ಗಿಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾರಾಷ್ಟ್ರದಲ್ಲಿ ವಿಚಾರವಾದಿ ನರೇಂದ್ರ ದಾಭೋಲ್ಕರರ ಬಲಿದಾನದಿಂದ ಮೂಢನಂಬಿಕೆ ನಿಷೇಧ ಕಾನೂನು ಅನುಷ್ಠಾನಗೊಂಡಿತು. ಅವರು ಜೀವಂತವಿದ್ದಾಗ ಅಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್- ಎನ್ಸಿಪಿ ಸರ್ಕಾರ ಮೃದು ಹಿಂದುತ್ವ ನೀತಿ ಅನುಸರಿಸುತ್ತಿದ್ದುದರಿಂದ, ಏನಾದರೊಂದು ನೆಪ ಹೇಳಿ ಮಸೂದೆ ಅಂಗೀಕರಿಸುವುದನ್ನು ಮುಂದೂಡುತ್ತಲೇ ಬಂದಿತ್ತು.<br /> <br /> ಆದರೆ ದಾಭೋಲ್ಕರರ ಹತ್ಯೆ ನಂತರ ಅವರ ಶಿಷ್ಯರು, ಅಭಿಮಾನಿಗಳು ಹಾಗೂ ಸಹವರ್ತಿಗಳು ಹೇರಿದ ಭಾರಿ ಒತ್ತಡದಿಂದ ಸರ್ಕಾರ ಮಸೂದೆ ಅಂಗೀಕರಿಸುವ ಅನಿವಾರ್ಯ ಉಂಟಾಯಿತು. ಹೀಗೆ ದಾಭೋಲ್ಕರರ ಬಲಿದಾನ ಕೊನೆಗೂ ವ್ಯರ್ಥವಾಗಲಿಲ್ಲ.<br /> <br /> ಅದೇ ರೀತಿ ಡಾ. ಎಂ.ಎಂ.ಕಲಬುರ್ಗಿಯವರ ಬಲಿದಾನವೂ ವ್ಯರ್ಥವಾಗದಿರಲಿ. ಮೂಢನಂಬಿಕೆ ನಿಷೇಧ ಕಾಯ್ದೆ ಕರ್ನಾಟಕದಲ್ಲೂ ಅನುಷ್ಠಾನವಾಗುವಂತೆ ಕಲಬುರ್ಗಿಯವರ ಅಭಿಮಾನಿಗಳಾಗಿರುವ ಸಮಸ್ತ ಕನ್ನಡಿಗರೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿ.<br /> <br /> ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರವೂ ಮೃದು ಹಿಂದುತ್ವ ನೀತಿ ಅನುಸರಿಸುತ್ತಿರುವುದರಿಂದ ಈ ಕಾಯ್ದೆಯ ಅನುಷ್ಠಾನಕ್ಕೆ ಅಷ್ಟು ಸುಲಭವಾಗಿ ಅದು ಒಪ್ಪಲಿಕ್ಕಿಲ್ಲ. ಆದರೆ ಈಗ ಪ್ರೊ. ಕಲಬುರ್ಗಿಯವರ ಹತ್ಯೆಯಿಂದಾಗಿ ಪರಿಸ್ಥಿತಿ ಕಾವೇರಿರುವುದರಿಂದ ಸರ್ಕಾರದ ಮೇಲೆ ಒತ್ತಡ ಹೇರಿ ಕಾಯ್ದೆ ಅನುಷ್ಠಾನಗೊಳಿಸುವ ಸುಸಮಯ ಒದಗಿ ಬಂದಿದೆ. ಈ ಸಂದರ್ಭ ಕೈತಪ್ಪಲು ಬಿಡಬಾರದು. ಇದುವೇ ಕಲಬುರ್ಗಿಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>