ಬಸವನಗುಡಿ ಪ್ರದೇಶದ ಕೆಲವೆಡೆ ಬಸ್ ತಂಗುದಾಣದ ಅಗತ್ಯವಿದೆ. ಮಳೆ ಬಂದರೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದೆ. ಬಸ್ ಸಹ ನಿಗದಿತ ಸ್ಥಳದಲ್ಲಿ ನಿಲ್ಲುವುದಿಲ್ಲ.
ಬಸವನಗುಡಿ ಪೊಲೀಸ್ ಸ್ಟೇಷನ್, ರಾಮಕೃಷ್ಣಾಶ್ರಮ ಎರಡೂ ಬದಿಯಲ್ಲಿಯೂ ಬಸ್ನಿಲ್ದಾಣಗಳಿಲ್ಲ. ಜನ ನಿಂತೆಡೆ ಬಸ್ ನಿಲ್ಲುತ್ತದೆ. ಮಳೆ ಬಂದರೆ, ಪ್ರಯಾಣಿಕರು ನಿಂತು ಕಾಯುವುದೂ ಕಷ್ಟದ ಕೆಲಸವಾಗಿದೆ. ಬಸ್ ಹಿಂದೆ ಓಡಾಡಬೇಕಾಗುತ್ತದೆ. ಇಲ್ಲಿ ಒಂದು ತಂಗುದಾಣ ಅಗತ್ಯವಾಗಿದ್ದು, ಸಂಬಂಧಪಟ್ಟವರು ಕ್ರಮಕೈಗೊಳ್ಳಲು ಕೋರಿಕೆ