ರಾಮಮೂರ್ತಿನಗರದಿಂದ ಶಿವಾಜಿನಗರಕ್ಕೆ ಸಾಕಷ್ಟು ಬಸ್ಸುಗಳು ಓಡಾಡುತ್ತಿವೆ. ಆದರೆ ಇದೇ ರಾಮಮೂರ್ತಿನಗರದಿಂದ ಕೃ.ರಾ. ಮಾರುಕಟ್ಟೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಬಸ್ಸುಗಳ ಸಂಖ್ಯೆ ಕಡಿಮೆ.
ಕೃ.ರಾ. ಮಾರುಕಟ್ಟೆಗೆ ಹೋಗುವ ಅನೇಕ ಸಣ್ಣ ಪ್ರಮಾಣದ ವ್ಯಾಪಾರಿಗಳು ಕೆಲವು ಸಲ ಅರ್ಧ ಗಂಟೆ, ಮುಕ್ಕಾಲು ಗಂಟೆ ಕಾಯಬೇಕಾಗುತ್ತದೆ. ಎರಡು ಬಸ್ಗಳ ಮೂಲಕ ಹೋಗಲು ₨ 50ಕ್ಕಿಂತ ಹೆಚ್ಚು ಹಣ ವ್ಯಯಿಸಬೇಕು.
ಬಡ ಹಾಗೂ ಸಾಮಾನ್ಯ ಜನರ ಹಿತದೃಷ್ಟಿಯಿಂದ ಹೊಸಕೋಟೆ, ಕೆ.ಆರ್.ಪುರ ಮೂಲಕ ಹೋಗುವ ಕೆಲವು ಬಸ್ಸುಗಳನ್ನು ರಾಮಮೂರ್ತಿನಗರದ ಮೂಲಕ ಹೋಗುವ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಹಾಗೂ ಬಸ್ಸಿಗೆ ಕಾಯುವ ಸಮಯವೂ ಉಳಿದು ಸಹಕಾರಿಯಾಗುವುದು. ಅವರಿಗೆ ಬಿಎಂಟಿಸಿ ಈ ಮೂಲಕ ನಮಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.