‘ಭಾರತೀಯ ರೈಲ್ವೆಯಂತೆಯೇ ಅಂಚೆ ಜಾಲ ಕೂಡ ದೇಶದ ಆರ್ಥಿಕತೆಗೆ ಚಾಲಕ ಶಕ್ತಿಯಾಗಬಹುದು ಎಂದು ಪ್ರಧಾನಿ ಹೇಳಿರುವುದು (ಪ್ರ.ವಾ., ಜ. 8) ಗಮನಾರ್ಹ. ಇದು ಸಾಕಾರಗೊಳ್ಳಬೇಕಾದರೆ ಅಂಚೆ ಜಾಲದ ಕಾರ್ಯಕ್ಷಮತೆ ಹೆಚ್ಚಿಸುವ ಕೆಲಸ ಮೊದಲು ಆಗ ಬೇಕು. ಅಂಚೆ ಸೇವೆಗಳ ಶೋಚನೀಯ ಸ್ಥಿತಿಗೆ ಖಾಸಗಿ ಕೊರಿಯರ್ ಸೇವಾ ಸಂಸ್ಥೆಗಳ ಜನಪ್ರಿಯತೆಯೇ ಕನ್ನಡಿ ಹಿಡಿಯುತ್ತದೆ.
ಬೆಂಗಳೂರಿನಂಥ ಮಹಾನಗರ ಬಿಟ್ಟರೆ ಗ್ರಾಮೀಣ ಪ್ರದೇಶಗಳಿಗೆ ಪತ್ರಗಳು ಆಮೆಗತಿಯಲ್ಲಿಯೇ ತಲುಪುತ್ತಿವೆ. ಅಂಚೆ ಪೆಟ್ಟಿಗೆಗಳು ಬಣ್ಣ ಕಳೆದುಕೊಂಡು ಇಲಾಖೆಯ ಪಳೆಯುಳಿಕೆಗಳಂತೆ ಕಾಣುತ್ತಿವೆ. ಪೆಟ್ಟಿಗೆಗಳ ಮೇಲೆ ಕ್ಲಿಯರೆನ್್ಸ ವೇಳಾಪಟ್ಟಿಯೇ ನಮೂದಾಗಿರುವುದಿಲ್ಲ. ಇಷ್ಟೊಂದು ಅಸಡ್ಡೆ ಏಕೆ? ಈ ನ್ಯೂನತೆಗಳು ನಿವಾರಣೆ ಆಗುವವೇ?