<p>ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಯೋಜನೆಯ ಸಿಡಿಟಿಪಿ, ಪಾಲಿಟೆಕ್ನಿಕ್ ಮುಖಾಂತರ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಉಚಿತ ತರಬೇತಿಗಳನ್ನು ನೀಡುತ್ತಿತ್ತು. <br /> <br /> ಇತ್ತೀಚಿನ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರಕ್ಕೆ ಇದನ್ನು ವಹಿಸಿದೆ. ಆದರೆ ಸಂಬಂಧಪಟ್ಟ ಇಲಾಖೆಯಾದ ತಾಂತ್ರಿಕ ಶಿಕ್ಷಣ ಇಲಾಖೆ ಇವತ್ತಿನವರೆಗೂ ಅನುದಾನ ನೀಡಿಲ್ಲ. <br /> <br /> ಕರ್ನಾಟಕದ ಎಲ್ಲಾ ಪಾಲಿಟೆಕ್ನಿಕ್ಗಳು ಈ ಅನುದಾನದ ಸಮಸ್ಯೆ ಎದುರಿಸುತ್ತಿವೆ. ಜೊತೆಯಲ್ಲಿ ಇದನ್ನು ನಂಬಿ ಬಡ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ಗಳಿಗೆ ಭೇಟಿ ಮಾಡಿ ಕೇಳಿದರೆ `ನಮಗೆ ಅನುದಾನ ಬಂದಿಲ್ಲ ಸಂಬಳ ನೀಡಿಲ್ಲ ನಮಗೆ ಅನುದಾನ ಬಂದ ತಕ್ಷಣ ಇಲ್ಲೂ ಉಚಿತ ತರಬೇತಿ ಪ್ರಾರಂಭ ಮಾಡುತ್ತೇವೆ~ ಎಂದು ಹೇಳಿಕೆ ನೀಡಿದ್ದಾರೆ.<br /> <br /> ಈ ಯೋಜನೆಗೆ ಸಂಬಂಧಪಟ್ಟ ರಾಜ್ಯದ ಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳು, ತಾಂತ್ರಿಕ ಶಿಕ್ಷಣ ಇಲಾಖೆಯವರು ಗಮನಹರಿಸಿ ಅನುದಾನ ಬಿಡುಗಡೆ ಮಾಡಿದರೆ ಬಡ ವಿದ್ಯಾರ್ಥಿಗಳು, ನಿರುದ್ಯೋಗಿ, ಮಹಿಳೆಯರಿಗೆಅನುಕೂಲವಾಗುತ್ತದೆ.<br /> <br /> ಈ ಯೋಜನೆಯಲ್ಲಿ ಟೈಲರಿಂಗ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಮೊಬೈಲ್ ತರಬೇತಿ, ಕಂಪ್ಯೂಟರ್ ರಿಪೇರಿ, ಗೃಹೋಪಯೋಗಿ ರಿಪೇರಿ ತರಬೇತಿ ಪಡೆದು ಸ್ವಉದ್ಯೋಗ ಮಾಡುತ್ತಿದ್ದಾರೆ. ಇಂತಹ ಯೋಜನೆ ಈಗ ಕುಂಠಿತಗೊಂಡಿದೆ. <br /> <br /> ಸಂಬಂಧಪಟ್ಟ ಇಲಾಖೆ ಅನುದಾನ ಬಿಡುಗಡೆ ಮಾಡಿ ಎಂದು ಎಲ್ಲಾ ಮಹಿಳೆಯರ ಪರವಾಗಿ, ನಿರುದ್ಯೋಗಿ ಯುವಕ/ ಯುವತಿಯರ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಯೋಜನೆಯ ಸಿಡಿಟಿಪಿ, ಪಾಲಿಟೆಕ್ನಿಕ್ ಮುಖಾಂತರ ಸಮುದಾಯ ಅಭಿವೃದ್ಧಿ ಯೋಜನೆಯಲ್ಲಿ ಉಚಿತ ತರಬೇತಿಗಳನ್ನು ನೀಡುತ್ತಿತ್ತು. <br /> <br /> ಇತ್ತೀಚಿನ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರಕ್ಕೆ ಇದನ್ನು ವಹಿಸಿದೆ. ಆದರೆ ಸಂಬಂಧಪಟ್ಟ ಇಲಾಖೆಯಾದ ತಾಂತ್ರಿಕ ಶಿಕ್ಷಣ ಇಲಾಖೆ ಇವತ್ತಿನವರೆಗೂ ಅನುದಾನ ನೀಡಿಲ್ಲ. <br /> <br /> ಕರ್ನಾಟಕದ ಎಲ್ಲಾ ಪಾಲಿಟೆಕ್ನಿಕ್ಗಳು ಈ ಅನುದಾನದ ಸಮಸ್ಯೆ ಎದುರಿಸುತ್ತಿವೆ. ಜೊತೆಯಲ್ಲಿ ಇದನ್ನು ನಂಬಿ ಬಡ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ಗಳಿಗೆ ಭೇಟಿ ಮಾಡಿ ಕೇಳಿದರೆ `ನಮಗೆ ಅನುದಾನ ಬಂದಿಲ್ಲ ಸಂಬಳ ನೀಡಿಲ್ಲ ನಮಗೆ ಅನುದಾನ ಬಂದ ತಕ್ಷಣ ಇಲ್ಲೂ ಉಚಿತ ತರಬೇತಿ ಪ್ರಾರಂಭ ಮಾಡುತ್ತೇವೆ~ ಎಂದು ಹೇಳಿಕೆ ನೀಡಿದ್ದಾರೆ.<br /> <br /> ಈ ಯೋಜನೆಗೆ ಸಂಬಂಧಪಟ್ಟ ರಾಜ್ಯದ ಮುಖ್ಯಮಂತ್ರಿ, ಹಣಕಾಸು ಇಲಾಖೆ ಅಧಿಕಾರಿಗಳು, ತಾಂತ್ರಿಕ ಶಿಕ್ಷಣ ಇಲಾಖೆಯವರು ಗಮನಹರಿಸಿ ಅನುದಾನ ಬಿಡುಗಡೆ ಮಾಡಿದರೆ ಬಡ ವಿದ್ಯಾರ್ಥಿಗಳು, ನಿರುದ್ಯೋಗಿ, ಮಹಿಳೆಯರಿಗೆಅನುಕೂಲವಾಗುತ್ತದೆ.<br /> <br /> ಈ ಯೋಜನೆಯಲ್ಲಿ ಟೈಲರಿಂಗ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಮೊಬೈಲ್ ತರಬೇತಿ, ಕಂಪ್ಯೂಟರ್ ರಿಪೇರಿ, ಗೃಹೋಪಯೋಗಿ ರಿಪೇರಿ ತರಬೇತಿ ಪಡೆದು ಸ್ವಉದ್ಯೋಗ ಮಾಡುತ್ತಿದ್ದಾರೆ. ಇಂತಹ ಯೋಜನೆ ಈಗ ಕುಂಠಿತಗೊಂಡಿದೆ. <br /> <br /> ಸಂಬಂಧಪಟ್ಟ ಇಲಾಖೆ ಅನುದಾನ ಬಿಡುಗಡೆ ಮಾಡಿ ಎಂದು ಎಲ್ಲಾ ಮಹಿಳೆಯರ ಪರವಾಗಿ, ನಿರುದ್ಯೋಗಿ ಯುವಕ/ ಯುವತಿಯರ ಪರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>