ಪೌರಕಾರ್ಮಿಕರು ಬೆಳಿಗ್ಗೆ 8– 9 ಗಂಟೆಯಾದರೂ ಬೀದಿ ಗುಡಿಸುವ ಕೆಲಸ ಮುಗಿಸಿರುವುದಿಲ್ಲ. ಮಾರುಕಟ್ಟೆ– ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಇದೇ ದೃಶ್ಯ ಕಂಡು ಬರುತ್ತದೆ.
ನಾಗರಿಕರು ಈ ಸಮಯದಲ್ಲಿ ಕೆಲಸ ಕಾರ್ಯಗಳಿಗೆ ಹೋಗಲು ಹಾಗೂ ನಗರ ಸಾರಿಗೆ ಬಸ್ಗಳಿಗಾಗಿ ಕಾಯುತ್ತಿರುತ್ತಾರೆ. ಕಸ ಗುಡಿಸುವಾಗ ಮೇಲೆ ಏಳುವ ದೂಳು ಎಲ್ಲರಿಗೂ ಕಿರಿಕಿರಿ ಉಂಟು ಮಾಡುತ್ತದೆ.
ನಗರ ನಿವಾಸಿಗಳ ಆರೋಗ್ಯ ದೃಷ್ಟಿಯಿಂದ ಹಾಗೂ ನಾಗರಿಕರಿಗೆ ತೊಂದರೆಯಾಗದಂತೆ ನಮ್ಮ ಪೌರ ಕಾರ್ಮಿಕರು ರಸ್ತೆಗಳ ಸ್ವಚ್ಛತಾ ಕಾರ್ಯವನ್ನು ಪ್ರತಿದಿನ ಬೆಳಿಗ್ಗೆ ಆರು ಗಂಟೆ ವೇಳೆಗೆ ಮುಗಿಸುವಂತೆ ಆಗಬೇಕು.