‘ಐದು ತಿಂಗಳಲ್ಲೇ ಕಿತ್ತುಹೋದ ರಸ್ತೆ’ (ಪ್ರ.ವಾ. ದಿ. 30–7–2015) ಎಂದು ವರ್ತೂರು ವಾರ್ಡ್ ಸ್ಥಳೀಯರು ದೂರಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅದೆಷ್ಟೋ ವಾಸಿ, ಕೋಣೇನ ಅಗ್ರಹಾರ 113ನೇ ವಾರ್ಡು ಐ.ಎಸ್.ಆರ್.ಒ. ಕಾಂಪೌಂಡ್ ಪಕ್ಕ ಮತ್ತು ಬಿ.ಡಿ.ಎ. ಮುಖ್ಯರಸ್ತೆಗಳಿಗೆ ಮೇ 2015ರಲ್ಲಿ ಡಾಂಬರೀಕರಣ ನಡೆಯಿತು. ಜೂನ್ ತಿಂಗಳಲ್ಲಿ ಡಾಂಬರು ಮಾಯವಾಗಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಮನ್ವಯದಿಂದ ರಸ್ತೆಗಳನ್ನು ಪ್ರತಿ ತಿಂಗಳು ಡಾಂಬರೀಕರಿಸಬೇಕು ಮತ್ತು ಮೂರು ದಿನಕ್ಕೊಮ್ಮೆ ಗುಂಡಿಗಳನ್ನು ಲೆಕ್ಕ ಹಾಕಿ ಮುಚ್ಚಬೇಕು. ಆಗ ನಿಷ್ಠೆಯಿಂದ ತೆರಿಗೆ ನೀಡುವ ನಾಗರಿಕ ಉದ್ಧಾರವಾಗುತ್ತಾನೆ. ಇದಕ್ಕೆ ಯಾರು ಹೊಣೆ?