<p>ನಮ್ಮ ದೇಶದಲ್ಲಿ ಸರ್ಕಾರಿ ಆಜ್ಞೆಗೆ ಇರುವಷ್ಟೇ ಪ್ರಭಾವವು ‘ವದಂತಿ’ಗಳಿಗೂ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಸರ್ಕಾರ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಕೂಡಲೇ, ಸಂದು–ಮೂಲೆಗಳಲ್ಲಿ ಅಡಗಿದ್ದ ದೊಡ್ಡ ಮೊತ್ತದ ನೋಟುಗಳೆಲ್ಲ ಹೊರಬಂದವು.<br /> ಈಗ ಒಂದು ಗಾಳಿಸುದ್ದಿ ನಾಣ್ಯಗಳನ್ನು ಹೊರತರುತ್ತಿದೆ. ಚಲಾವಣೆಯಲ್ಲಿರುವ ₹ 10ರ ಮುಖಬೆಲೆಯ ನಾಣ್ಯ ನಕಲಿ ಎಂದೂ ಮತ್ತು ಅದರ ಚಲಾವಣೆಯನ್ನು ರದ್ದುಪಡಿಸಲಾಗಿದೆ ಎಂದೂ ವದಂತಿ ಹಬ್ಬಿದ್ದೇ ತಡ ಜನರ ಬಳಿ ಇದ್ದ ನಾಣ್ಯಗಳು ಹೊರಬರುತ್ತಿವೆ.<br /> <br /> ನೋಡಲು ಆಕರ್ಷಕವಾಗಿರುವ ಕಾರಣಕ್ಕೆ ₹ 10ರ ನಾಣ್ಯ ಸಿಕ್ಕಿದರೆ ಸಾಕು ಅದನ್ನು ಚಲಾವಣೆಗೆ ಬಿಡದೆ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಈಗ ಅವು ಎಲ್ಲಿದ್ದರೂ ಹುಡುಕಿ ತೆಗೆದು ಚಲಾವಣೆಗೆ ಬಿಡುತ್ತಿದ್ದಾರೆ. ₹ 2000 ಮುಖಬೆಲೆಯ ಒಂದು ನೋಟು ಮುದ್ರಿಸಲು ₹ 3.54 ಖರ್ಚಾದರೆ, ₹ 10ರ ಒಂದು ನಾಣ್ಯ ಟಂಕಿಸಲು ₹ 6.10 ಬೇಕಾಗುತ್ತದೆ ಎಂಬ ಮಾಹಿತಿ ಇದ್ದವರೂ ತಮ್ಮ ಬಳಿ ಇರುವ ನಾಣ್ಯವು ಅಸಲಿ ಎಂದು ನಂಬುತ್ತಿಲ್ಲ. ಆಗಾಗ್ಗೆ ಈ ರೀತಿಯ ವದಂತಿ ಹಬ್ಬುತ್ತಿದ್ದರೆ ಚಿಲ್ಲರೆಯ ಸಮಸ್ಯೆ ಬಗೆಹರಿಯಬಹುದೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ದೇಶದಲ್ಲಿ ಸರ್ಕಾರಿ ಆಜ್ಞೆಗೆ ಇರುವಷ್ಟೇ ಪ್ರಭಾವವು ‘ವದಂತಿ’ಗಳಿಗೂ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಸರ್ಕಾರ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಕೂಡಲೇ, ಸಂದು–ಮೂಲೆಗಳಲ್ಲಿ ಅಡಗಿದ್ದ ದೊಡ್ಡ ಮೊತ್ತದ ನೋಟುಗಳೆಲ್ಲ ಹೊರಬಂದವು.<br /> ಈಗ ಒಂದು ಗಾಳಿಸುದ್ದಿ ನಾಣ್ಯಗಳನ್ನು ಹೊರತರುತ್ತಿದೆ. ಚಲಾವಣೆಯಲ್ಲಿರುವ ₹ 10ರ ಮುಖಬೆಲೆಯ ನಾಣ್ಯ ನಕಲಿ ಎಂದೂ ಮತ್ತು ಅದರ ಚಲಾವಣೆಯನ್ನು ರದ್ದುಪಡಿಸಲಾಗಿದೆ ಎಂದೂ ವದಂತಿ ಹಬ್ಬಿದ್ದೇ ತಡ ಜನರ ಬಳಿ ಇದ್ದ ನಾಣ್ಯಗಳು ಹೊರಬರುತ್ತಿವೆ.<br /> <br /> ನೋಡಲು ಆಕರ್ಷಕವಾಗಿರುವ ಕಾರಣಕ್ಕೆ ₹ 10ರ ನಾಣ್ಯ ಸಿಕ್ಕಿದರೆ ಸಾಕು ಅದನ್ನು ಚಲಾವಣೆಗೆ ಬಿಡದೆ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು. ಈಗ ಅವು ಎಲ್ಲಿದ್ದರೂ ಹುಡುಕಿ ತೆಗೆದು ಚಲಾವಣೆಗೆ ಬಿಡುತ್ತಿದ್ದಾರೆ. ₹ 2000 ಮುಖಬೆಲೆಯ ಒಂದು ನೋಟು ಮುದ್ರಿಸಲು ₹ 3.54 ಖರ್ಚಾದರೆ, ₹ 10ರ ಒಂದು ನಾಣ್ಯ ಟಂಕಿಸಲು ₹ 6.10 ಬೇಕಾಗುತ್ತದೆ ಎಂಬ ಮಾಹಿತಿ ಇದ್ದವರೂ ತಮ್ಮ ಬಳಿ ಇರುವ ನಾಣ್ಯವು ಅಸಲಿ ಎಂದು ನಂಬುತ್ತಿಲ್ಲ. ಆಗಾಗ್ಗೆ ಈ ರೀತಿಯ ವದಂತಿ ಹಬ್ಬುತ್ತಿದ್ದರೆ ಚಿಲ್ಲರೆಯ ಸಮಸ್ಯೆ ಬಗೆಹರಿಯಬಹುದೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>