ಇಂಥ ಆದರ್ಶವನ್ನು ಘನತೆವೆತ್ತ ವ್ಯಕ್ತಿಗಳೂ ಪಾಲಿಸಲಿ. ಇಷ್ಟಕ್ಕೂ ಈ ಸನ್ಮಾನಗಳ ಏರ್ಪಾಟು ಕೆಲ ವ್ಯಕ್ತಿಗಳಿಗೆ, ಸಂಘಗಳಿಗೆ ನೆಪ ಅಷ್ಟೆ. ಹಾಗೆ ಆಯೋಜಿಸುವ ಉದ್ದೇಶ ತಮ್ಮ ಹೆಚ್ಚುಗಾರಿಕೆ ಮೆರೆಯಲು, ಅಥವಾ ತಮ್ಮ ಜಾತಿಯನ್ನು ಮೆರೆಸಲು ಇಲ್ಲವೇ ತಮಗಾಗದ ವ್ಯಕ್ತಿಗಳ ಅಥವಾ ಜಾತಿಗಳ ಹೀಯಾಳಿಕೆಗಳಿಗೆ (ಸನ್ಮಾನ ಸಮಾರಂಭಕ್ಕೆ ಸಂಬಂಧಪಡದಿದ್ದರೂ) ಮತ್ತು ಪತ್ರಿಕೆ ಗಳಲ್ಲಿ ಮಿಂಚುವುದಕ್ಕೇ ಆಗಿರುತ್ತದೆ.
–ಗೌರಿಬಿದನೂರು ರಂಗಪ್ಪ, ಬೆಂಗಳೂರು.