ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿದಿನ ಲಕ್ಷಕ್ಕಿಂತ ಹೆಚ್ಚು ಜನ ಬಂದು ಸಂಭ್ರಮಿಸಿದರು. ಸಂತೋಷ. ಆದರೆ ಸಮ್ಮೇಳನಾಧ್ಯಕ್ಷರ ಭಾಷಣದಿಂದ ಹಿಡಿದು, ಸಮ್ಮೇಳನದ ಆಗುಹೋಗುಗಳನ್ನು ಅವಲೋಕಿಸಿದರೆ, ಸಾಹಿತ್ಯವನ್ನು ಬಿಟ್ಟು ಮಿಕ್ಕೆಲ್ಲ ಸಮಸ್ಯೆಗಳ ಚರ್ಚೆಯಾಯಿತು. ಕನ್ನಡ ವಿಜ್ಞಾನ, ವೈದ್ಯ ಸಾಹಿತ್ಯವು ಸಂಘಟಕರಿಗೆ ಮರೆತೇ ಹೋಯಿತು.
ಆದ್ದರಿಂದ ಇನ್ನು ಮುಂದೆ ಈ ಸಾಹಿತ್ಯ ಸಮ್ಮೇಳನವನ್ನು ಅಖಿಲ ಭಾರತ ಕನ್ನಡಿಗರ ಸಮಸ್ಯೆಗಳ ಸಮ್ಮೇಳನ ಎಂದು ಕರೆಯಲು ಕಸಾಪದ ಎಲ್ಲ ಪದಾಧಿಕಾರಿಗಳಿಗೆ ವಿನಂತಿಸುತ್ತೇನೆ.