<p><strong>ಢಾಕಾ</strong>: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ.</p><p><strong>ಢಾಕಾದ ನೈರುತ್ಯ ಭಾಗ ಖುಲ್ನಾ ನಗರದಲ್ಲಿ ನಿನ್ನೆ ಡಿಸೆಂಬರ್ 21 ರಂದು </strong>ಮೋತಲೆಬ್ ಸಿಕ್ದಾರ್ (42) ಎನ್ನುವ ಯುವ ನಾಯಕನನ್ನು ಆತನ ಮನೆ ಬಳಿ ಆಗಂತುಕರು ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.</p><p>ಮೋತಲೆಬ್ ಸಿಕ್ದಾರ್ ನ್ಯಾಷನಲ್ ಸಿಟಿಜನ್ ಪಾರ್ಟಿಯ <strong>ಖುಲ್ನಾ ನಗರದ ಅಧ್ಯಕ್ಷ ಆಗಿದ್ದರು ಎಂದು ಆ ಪಕ್ಷದ ನಾಯಕ ಮಾಹ್ಮುದಾ ಮಿತು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</strong></p><p>ಸಿಕ್ದಾರ್ ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಿಲ್ಲ, ಹಂತಕರು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸ್ಥಳೀಯ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.</p><p>ಕಳೆದ ಡಿ.12ರಂದು ಸಮಾವೇಶವೊಂದರಲ್ಲಿ ಬಾಂಗ್ಲಾದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರನ್ನೂ ಹಂತಕರು ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಘಟನೆ ಬಾಂಗ್ಲಾದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ. ಶರೀಫ್ ಉಸ್ಮಾನ್ ಹಾದಿ ಹಾಗೂ ಸಿಕ್ದಾರ್ ಹಸೀನಾ ಸರ್ಕಾರದ ಹಾಗೂ ಭಾರತ ವಿರೋಧಿ ನಿಲುವು ಹೊಂದಿದ್ದರು ಎನ್ನಲಾಗಿದೆ.</p><p>ಶರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.</p><p>ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.</p><p>ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. </p><p>ದೀಪು ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾರತ ಆಗ್ರಹಿಸಿದೆ.</p>.ಹಾದಿ ಇದೀಗ ಬಾಂಗ್ಲಾ ಯುವಕರ ಹೀರೊ! ಡಾಕಾ ವಿವಿ ಮುಜಿಬುರ್ ಸಭಾಂಗಣಕ್ಕೆ ಆತನ ಹೆಸರು.ಮೀಸಲಾತಿ ವಿರೋಧಿ ಹೋರಾಟದ ನಾಯಕ ಹಾದಿ ಹತ್ಯೆ: ಬಾಂಗ್ಲಾ ಮತ್ತೊಮ್ಮೆ ಉದ್ವಿಗ್ನ
<p><strong>ಢಾಕಾ</strong>: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ.</p><p><strong>ಢಾಕಾದ ನೈರುತ್ಯ ಭಾಗ ಖುಲ್ನಾ ನಗರದಲ್ಲಿ ನಿನ್ನೆ ಡಿಸೆಂಬರ್ 21 ರಂದು </strong>ಮೋತಲೆಬ್ ಸಿಕ್ದಾರ್ (42) ಎನ್ನುವ ಯುವ ನಾಯಕನನ್ನು ಆತನ ಮನೆ ಬಳಿ ಆಗಂತುಕರು ಹಣೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ.</p><p>ಮೋತಲೆಬ್ ಸಿಕ್ದಾರ್ ನ್ಯಾಷನಲ್ ಸಿಟಿಜನ್ ಪಾರ್ಟಿಯ <strong>ಖುಲ್ನಾ ನಗರದ ಅಧ್ಯಕ್ಷ ಆಗಿದ್ದರು ಎಂದು ಆ ಪಕ್ಷದ ನಾಯಕ ಮಾಹ್ಮುದಾ ಮಿತು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.</strong></p><p>ಸಿಕ್ದಾರ್ ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಿಲ್ಲ, ಹಂತಕರು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸ್ಥಳೀಯ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.</p><p>ಕಳೆದ ಡಿ.12ರಂದು ಸಮಾವೇಶವೊಂದರಲ್ಲಿ ಬಾಂಗ್ಲಾದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರನ್ನೂ ಹಂತಕರು ತಲೆಗೆ ಗುಂಡಿಟ್ಟು ಹತ್ಯೆ ಮಾಡಿದ್ದರು. ಈ ಘಟನೆ ಬಾಂಗ್ಲಾದಲ್ಲಿ ಮತ್ತೆ ಉದ್ವಿಗ್ನತೆಗೆ ಕಾರಣವಾಗಿದೆ. ಶರೀಫ್ ಉಸ್ಮಾನ್ ಹಾದಿ ಹಾಗೂ ಸಿಕ್ದಾರ್ ಹಸೀನಾ ಸರ್ಕಾರದ ಹಾಗೂ ಭಾರತ ವಿರೋಧಿ ನಿಲುವು ಹೊಂದಿದ್ದರು ಎನ್ನಲಾಗಿದೆ.</p><p>ಶರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.</p><p>ಶೇಖ್ ಮುಜಿಬುರ್ ರೆಹಮಾನ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.</p><p>ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. </p><p>ದೀಪು ಹತ್ಯೆಗೆ ನ್ಯಾಯ ದೊರೆಯಬೇಕು ಮತ್ತು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಭಾರತ ಆಗ್ರಹಿಸಿದೆ.</p>.ಹಾದಿ ಇದೀಗ ಬಾಂಗ್ಲಾ ಯುವಕರ ಹೀರೊ! ಡಾಕಾ ವಿವಿ ಮುಜಿಬುರ್ ಸಭಾಂಗಣಕ್ಕೆ ಆತನ ಹೆಸರು.ಮೀಸಲಾತಿ ವಿರೋಧಿ ಹೋರಾಟದ ನಾಯಕ ಹಾದಿ ಹತ್ಯೆ: ಬಾಂಗ್ಲಾ ಮತ್ತೊಮ್ಮೆ ಉದ್ವಿಗ್ನ