ಕನ್ನಡ ಮತ್ತು ಸಂಸ್ಮೃತಿ ಇಲಾಖೆ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಬೇರೆ ಭಾಷೆಗಳ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟ ಮಾಡುತ್ತಿರುವುದು ಮೆಚ್ಚುವಂತಹದ್ದು. ಈಗ ಹೊರ ಬಂದಿರುವ ‘ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು’ ಎಂಬ ಮಾಲಿಕೆಯ 22 ಸಂಪುಟಗಳು ಕನ್ನಡ ಓದುಗರ ಮೆಚ್ಚುಗೆಗೆ ಪಾತ್ರವಾಗಿವೆ.
ಬೇರೆ ಭಾಷೆಗಳಲ್ಲಿ ಪ್ರಕಟವಾಗಿರುವ ಸಾಧಕರು ಹಾಗೂ ಸಮಾಜ ಸುಧಾರಕರ ಮತ್ತಷ್ಟು ಕೃತಿಗಳನ್ನು ಕನ್ನಡಕ್ಕೆ ತರಬೇಕು. ಕಡಿಮೆ ಬೆಲೆಗೆ ಸಿಗುವ ಮಹತ್ವದ ಗ್ರಂಥಗಳು ಸಾರಸ್ವತ ಲೋಕಕ್ಕೆ ನಿರಂತರವಾಗಿ ಸೇರ್ಪಡೆ ಆಗಲಿ.
–ತೂಬಿನಕೆರೆ ಲಿಂಗರಾಜು, ಮಂಡ್ಯ