<p>ವಾಚಕರವಾಣಿಯಲ್ಲಿ ವಿಜಯಕಾಂತ ಪಾಟೀಲ ಅವರು ಗಹನವಾದ ಚರ್ಚೆಗೆ ಕಾರಣವಾಗುವಂಥ ವಿಚಾರವೊಂದನ್ನು ಓದುಗರ ಮುಂದಿಟ್ಟಿದ್ದಾರೆ. ಅದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಸಂಬಂಧಿಸಿದ್ದು. <br /> <br /> ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಷ್ಟೇ ಸಾಧನೆ ಮಾಡಿರುವ, ನಮ್ಮ ನಾಡು-ನುಡಿಯ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಅನೇಕರು ಬಾಳಿ ಹೋಗಿದ್ದಾರೆ. ಕೆಲವರು ಈಗಲೂ ಕನ್ನಡ ನುಡಿ ಸೇವೆಯನ್ನು ಮಾಡುತ್ತಿದ್ದಾರೆ.<br /> ಜಿ.ಎಸ್.ಶಿವರುದ್ರಪ್ಪ, ದೇವನೂರ ಮಹಾದೇವ, ಪಾಟೀಲ ಪುಟ್ಟಪ್ಪ, ಭೀಮಸೇನ ಜೋಶಿ, ಗುಬ್ಬಿ ವೀರಣ್ಣ, ರಾಜ್ಕುಮಾರ್, ಸುಬ್ಬಯ್ಯ ನಾಯ್ಡು, ಸರ್ ಎಂ.ವಿಶ್ವೇಶ್ವರಯ್ಯ-, ಸಿ.ಎನ್.ಆರ್. ರಾವ್ ಮೊದಲಾದ ಮಹನೀಯರು ತಮ್ಮದೇ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ್ದಾರೆ. ಇವರೆಲ್ಲರ ಪರಿಚಯ ಪ್ರಾಥಮಿಕ ಶಾಲಾ ಹಂತದಲ್ಲೇ ನಮ್ಮ ಮಕ್ಕಳಿಗೆ ಆಗುವುದು ಬೇಡವೇ? <br /> <br /> ನಮ್ಮ ನಾಡಿನ ಎಲ್ಲ ರಂಗಗಳ ಹಿರಿಯ ಸಾಧಕರ ಭಾವಚಿತ್ರಗಳು (ಅವರ ಪರಿಚಯದೊಂದಿಗೆ) ಶಾಲೆಗಳ ತರಗತಿಗಳ ಕೋಣೆಗಳಲ್ಲಿ ಪ್ರದರ್ಶಿಸುವುದು ಉತ್ತಮವಲ್ಲವೇ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಚಕರವಾಣಿಯಲ್ಲಿ ವಿಜಯಕಾಂತ ಪಾಟೀಲ ಅವರು ಗಹನವಾದ ಚರ್ಚೆಗೆ ಕಾರಣವಾಗುವಂಥ ವಿಚಾರವೊಂದನ್ನು ಓದುಗರ ಮುಂದಿಟ್ಟಿದ್ದಾರೆ. ಅದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಸಂಬಂಧಿಸಿದ್ದು. <br /> <br /> ಕನ್ನಡ ಸಾಹಿತ್ಯ ಲೋಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಷ್ಟೇ ಸಾಧನೆ ಮಾಡಿರುವ, ನಮ್ಮ ನಾಡು-ನುಡಿಯ ರಕ್ಷಣೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಅನೇಕರು ಬಾಳಿ ಹೋಗಿದ್ದಾರೆ. ಕೆಲವರು ಈಗಲೂ ಕನ್ನಡ ನುಡಿ ಸೇವೆಯನ್ನು ಮಾಡುತ್ತಿದ್ದಾರೆ.<br /> ಜಿ.ಎಸ್.ಶಿವರುದ್ರಪ್ಪ, ದೇವನೂರ ಮಹಾದೇವ, ಪಾಟೀಲ ಪುಟ್ಟಪ್ಪ, ಭೀಮಸೇನ ಜೋಶಿ, ಗುಬ್ಬಿ ವೀರಣ್ಣ, ರಾಜ್ಕುಮಾರ್, ಸುಬ್ಬಯ್ಯ ನಾಯ್ಡು, ಸರ್ ಎಂ.ವಿಶ್ವೇಶ್ವರಯ್ಯ-, ಸಿ.ಎನ್.ಆರ್. ರಾವ್ ಮೊದಲಾದ ಮಹನೀಯರು ತಮ್ಮದೇ ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿದ್ದಾರೆ. ಇವರೆಲ್ಲರ ಪರಿಚಯ ಪ್ರಾಥಮಿಕ ಶಾಲಾ ಹಂತದಲ್ಲೇ ನಮ್ಮ ಮಕ್ಕಳಿಗೆ ಆಗುವುದು ಬೇಡವೇ? <br /> <br /> ನಮ್ಮ ನಾಡಿನ ಎಲ್ಲ ರಂಗಗಳ ಹಿರಿಯ ಸಾಧಕರ ಭಾವಚಿತ್ರಗಳು (ಅವರ ಪರಿಚಯದೊಂದಿಗೆ) ಶಾಲೆಗಳ ತರಗತಿಗಳ ಕೋಣೆಗಳಲ್ಲಿ ಪ್ರದರ್ಶಿಸುವುದು ಉತ್ತಮವಲ್ಲವೇ?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>