<p>ಏರ್ಟೆಲ್ ಕಂಪೆನಿಯು ಗ್ರಾಹಕರನ್ನು ವಂಚಿಸುತ್ತಿರುವುದಕ್ಕೆ, ನಾನು ಈಚೆಗೆ ಅನುಭವಿಸಿರುವ ಎರಡು ಪ್ರಸಂಗಗಳನ್ನು ವಿವರಿಸುತ್ತೇನೆ.<br /> <br /> ಬ್ಯಾಲನ್ಸ್ ಮೊತ್ತವು ಕೇವಲ 5 ಪೈಸೆ ಉಳಿದಿರುವುದನ್ನು ಗಮನಿಸಿ, ₹ 50 ರೀಚಾರ್ಜ್ ಮಾಡಿಸಿದೆ. ‘ರೀಚಾರ್ಜ್ ಸಕ್ಸೆಸ್ಫುಲ್’ ಎಂಬ ಮೆಸೇಜ್ ಬಂದ ಬೆನ್ನ ಹಿಂದೆಯೇ, ‘ಥ್ಯಾಂಕ್ಸ್ ಫಾರ್ ಯೂಜಿಂಗ್... ಸರ್ವೀಸ್, ₹ 35 ಮುರಿಯಲಾಗಿದೆ’ ಎಂಬ ಸಂದೇಶ ಬಂತು!<br /> <br /> ರೀಚಾರ್ಜ್ ಮಾಡಿದವನು ನನ್ನ ಕೈಗೆ ಮೊಬೈಲು ಕೊಡುತ್ತಿದ್ದಂತೆ, ಮತ್ತೆ ಅಂಥದೇ ಇನ್ನೊಂದು ಸಂದೇಶ ಬಂದಿತು. ನಾನು ನೋಡುತ್ತಿದ್ದಂತೆ, ಬ್ಯಾಲನ್ಸ ಐದೇ ಪೈಸೆ ಉಳಿಯಿತು! ಇಷ್ಟೆಲ್ಲಾ ಆದದ್ದು, ರೀಚಾರ್ಜ್ ಮಾಡಿದ, ಕೆಲವೇ ಸೆಕೆಂಡುಗಳಲ್ಲಿ!<br /> <br /> ಎರಡು ದಿನಗಳ ಬಳಿಕ, ಮತ್ತೆ ಬೇರೆ ಕಡೆ ₹ 50 ರೀಚಾರ್ಜ್ ಮಾಡಿಸಿದೆ. ಒಂದೆರಡು ಕ್ಷಣಗಳ ಬಳಿಕ ‘ನಿಮ್ಮ ಮೊಬೈಲಿಗೆ ಟೈನಿ ಟಿ.ವಿ.ಸರ್ವೀಸ್ ನೀಡಲಾಗಿದೆ. ಈ ಸೇವೆಗಾಗಿ ₹ 35 ಅನ್ನು ಒಂದು ವಾರಕ್ಕೆ ಕಡಿತ ಮಾಡಲಾಗುವುದು!’ ಎಂಬ ಸಂದೇಶ ಬಂತು.<br /> <br /> ನಾನು ಯಾವ ಹೆಚ್ಚುವರಿ ಸೇವೆಗಳಿಗೂ ಬೇಡಿಕೆ ಸೂಚಿಸಿರಲಿಲ್ಲ! ಗ್ರಾಹಕರ ಹಣವನ್ನು ಈ ರೀತಿ ಮುರಿಯುವ ಮುನ್ನ, ಗ್ರಾಹಕರ ಸೇವಾ ಬೇಡಿಕೆ ಗಮನಿಸಬೇಕಲ್ಲವೇ?! ಗ್ರಾಹಕರು ಯಾವ ಸೇವೆಯನ್ನೂ ಕೇಳದಿರುವಾಗ, ಅವರ ಪೂರ್ವಾನುಮತಿಯಿಲ್ಲದೇ ಈ ರೀತಿ ಹಣ ಮುರಿಯುವುದು ವಂಚನೆಯಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಏರ್ಟೆಲ್ ಕಂಪೆನಿಯು ಗ್ರಾಹಕರನ್ನು ವಂಚಿಸುತ್ತಿರುವುದಕ್ಕೆ, ನಾನು ಈಚೆಗೆ ಅನುಭವಿಸಿರುವ ಎರಡು ಪ್ರಸಂಗಗಳನ್ನು ವಿವರಿಸುತ್ತೇನೆ.<br /> <br /> ಬ್ಯಾಲನ್ಸ್ ಮೊತ್ತವು ಕೇವಲ 5 ಪೈಸೆ ಉಳಿದಿರುವುದನ್ನು ಗಮನಿಸಿ, ₹ 50 ರೀಚಾರ್ಜ್ ಮಾಡಿಸಿದೆ. ‘ರೀಚಾರ್ಜ್ ಸಕ್ಸೆಸ್ಫುಲ್’ ಎಂಬ ಮೆಸೇಜ್ ಬಂದ ಬೆನ್ನ ಹಿಂದೆಯೇ, ‘ಥ್ಯಾಂಕ್ಸ್ ಫಾರ್ ಯೂಜಿಂಗ್... ಸರ್ವೀಸ್, ₹ 35 ಮುರಿಯಲಾಗಿದೆ’ ಎಂಬ ಸಂದೇಶ ಬಂತು!<br /> <br /> ರೀಚಾರ್ಜ್ ಮಾಡಿದವನು ನನ್ನ ಕೈಗೆ ಮೊಬೈಲು ಕೊಡುತ್ತಿದ್ದಂತೆ, ಮತ್ತೆ ಅಂಥದೇ ಇನ್ನೊಂದು ಸಂದೇಶ ಬಂದಿತು. ನಾನು ನೋಡುತ್ತಿದ್ದಂತೆ, ಬ್ಯಾಲನ್ಸ ಐದೇ ಪೈಸೆ ಉಳಿಯಿತು! ಇಷ್ಟೆಲ್ಲಾ ಆದದ್ದು, ರೀಚಾರ್ಜ್ ಮಾಡಿದ, ಕೆಲವೇ ಸೆಕೆಂಡುಗಳಲ್ಲಿ!<br /> <br /> ಎರಡು ದಿನಗಳ ಬಳಿಕ, ಮತ್ತೆ ಬೇರೆ ಕಡೆ ₹ 50 ರೀಚಾರ್ಜ್ ಮಾಡಿಸಿದೆ. ಒಂದೆರಡು ಕ್ಷಣಗಳ ಬಳಿಕ ‘ನಿಮ್ಮ ಮೊಬೈಲಿಗೆ ಟೈನಿ ಟಿ.ವಿ.ಸರ್ವೀಸ್ ನೀಡಲಾಗಿದೆ. ಈ ಸೇವೆಗಾಗಿ ₹ 35 ಅನ್ನು ಒಂದು ವಾರಕ್ಕೆ ಕಡಿತ ಮಾಡಲಾಗುವುದು!’ ಎಂಬ ಸಂದೇಶ ಬಂತು.<br /> <br /> ನಾನು ಯಾವ ಹೆಚ್ಚುವರಿ ಸೇವೆಗಳಿಗೂ ಬೇಡಿಕೆ ಸೂಚಿಸಿರಲಿಲ್ಲ! ಗ್ರಾಹಕರ ಹಣವನ್ನು ಈ ರೀತಿ ಮುರಿಯುವ ಮುನ್ನ, ಗ್ರಾಹಕರ ಸೇವಾ ಬೇಡಿಕೆ ಗಮನಿಸಬೇಕಲ್ಲವೇ?! ಗ್ರಾಹಕರು ಯಾವ ಸೇವೆಯನ್ನೂ ಕೇಳದಿರುವಾಗ, ಅವರ ಪೂರ್ವಾನುಮತಿಯಿಲ್ಲದೇ ಈ ರೀತಿ ಹಣ ಮುರಿಯುವುದು ವಂಚನೆಯಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>