ಬೆಂಗಳೂರಿಗೆ ಹೊಸ ಮೇಯರ್ ಮತ್ತು ಉಪಮೇಯರ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ನೆನಪಲ್ಲಿ ಇರಿಸಿಕೊಳ್ಳಬೇಕಾಗಿರುವುದೆಂದರೆ, ನಗರದ ಶೇಕಡ 51ರಷ್ಟು ಮತದಾರರು ಮತದಾನದಿಂದ ಹೊರಗುಳಿದಿದ್ದರು. ಆಯ್ಕೆಗೆ ಸೂಕ್ತರಿಲ್ಲ ಎಂಬ ಕಾರಣದಿಂದಲೂ ಅವರು ಮತದಾನದಿಂದ ಹೊರಗುಳಿದಿರಬಹುದು.
ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ‘ಸರಿಯಾದ ಅಭ್ಯರ್ಥಿಯಿಲ್ಲ, ಯಾರು ಆರಿಸಿ ಬಂದರೂ ಒಂದೇ’ ಎಂಬ ಪ್ರಮುಖ ಭಾವನೆ ಮತದಾರರಲ್ಲಿ ಬೆಳೆಯುತ್ತಿದೆ. ಈ ಭಾವನೆಯನ್ನು ಎಲ್ಲ ಅಭ್ಯರ್ಥಿಗಳೂ ಗಣನೆಗೆ ತೆಗೆದುಕೊಂಡು, ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸಿ, ಅವರಲ್ಲಿ ವಿಶ್ವಾಸ ಕುದುರಿಸಬೇಕು.