ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ ಮುಂದೆ ಅವರಲ್ಲಿ ಹಲವರು ಶಿಕ್ಷಣ ಮುಂದು ವರಿಸದೇ ನಿಲ್ಲಿಸಿಬಿಡುತ್ತಾರೆ.
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಮಾರ್ಗದರ್ಶಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಆ ವಿದ್ಯಾರ್ಥಿನಿಯ ಧೈರ್ಯ ಮೆಚ್ಚುವಂತಹದ್ದೇ. ಹೆಣ್ಣುಮಕ್ಕಳು ಸಂಶೋಧನೆ ಮಾಡುವುದೇ ಕಷ್ಟಸಾಧ್ಯವಾಗಿದೆ. ಸರಿಯಾದ ಮಾರ್ಗದರ್ಶಕರ ಕೊರತೆಯಿಂದ ಹೆಣ್ಣುಮಕ್ಕಳು ಸಂಶೋಧನೆ ಮಾಡಲು ಮುಂದಾಗುವುದೇ ಇಲ್ಲ.
ಸಣ್ಣಪುಟ್ಟ ಕೆಲಸ ಹಿಡಿದು ಸಮಾಧಾನ ಪಟ್ಟುಕೊಳ್ಳುತ್ತಾರೆ ಇಲ್ಲವೇ ಮದುವೆ ಮಾಡಿ ಕೊಂಡು ಹೋಗುತ್ತಾರೆ. ಅವರ ಪ್ರತಿಭೆ, ಸಾಮರ್ಥ್ಯ ಅಲ್ಲೇ ಕಮರಿ ಹೋಗುತ್ತದೆ.
ಅನೇಕ ಹೆಣ್ಣುಮಕ್ಕಳು ನಾನಾ ತರಹದ ಕಿರಿಕಿರಿಗಳನ್ನು ಅನುಭವಿಸಿದರೂ ತಮ್ಮ ವಿದ್ಯಾರ್ಥಿ ಜೀವನಕ್ಕೆ ಮತ್ತು ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ಹೆದರಿ ಬಾಯಿ ಬಿಡುವುದಿಲ್ಲ.
ಹೆಣ್ಣುಮಕ್ಕಳ ಈ ಅಸಹಾಯಕತೆಯನ್ನು ಬಳಸಿಕೊಂಡು ಅವರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ ಇದನ್ನು ಮಹಿಳೆಯರು ಒಗ್ಗಟ್ಟಿನಿಂದ ಪ್ರತಿಭಟಿಸಿದರೆ ಇತರರು ಬುದ್ಧಿ ಕಲಿಯಬಹುದು. ಇಂದು ಹೆಣ್ಣು ಮಕ್ಕಳು ಧ್ವನಿ ಎತ್ತಲೇಬೆಕಾಗಿದೆ.