<p>ಹೆಲ್ಮೆಟ್ ಕಡ್ಡಾಯವೆಂಬ ಭೂತ ದ್ವಿಚಕ್ರವಾಹನ ಸವಾರರಿಗೆ ಭಯ ಮೂಡಿಸಿದೆ. ಹಿಂಬದಿಯ ಸವಾರರು ಧರಿಸದಿರಲು ಹಲವಾರು ಕಾರಣಗಳಿವೆ. ಕೇಳಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಅಪಘಾತಗಳು ಸಂಭವಿಸಿದಾಗ ತಲೆಯ ಸುರಕ್ಷತೆಯನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶ ಸ್ವಾಗತಾರ್ಹ.<br /> <br /> ಅಪಘಾತಗಳೇ ಸಂಭವಿಸದಂತೆ ಸುರಕ್ಷಿತ ರಸ್ತೆಗಳು ಮತ್ತು ಇತರೆ ಸೌಕರ್ಯಗಳನ್ನು ಸವಾರರಿಗೆ ಒದಗಿಸಬೇಕೆಂದು ಕಡ್ಡಾಯ ಮಾಡಿದ್ದರೆ ಚೆನ್ನಾಗಿತ್ತು. ನ್ಯಾಯಾಲಯದ ಆದೇಶವನ್ನೇ ಆಧಾರವಾಗಿಟ್ಟುಕೊಂಡು ದಾಖಲೆ ನಿರ್ಮಿಸುವಂತೆ ದಂಡವಸೂಲಿ, ಚಾಲನಾ ಪರವಾನಗಿ ಮುಟ್ಟುಗೋಲಿನಂತಹ ಕ್ರಮ ಕೈಗೊಳ್ಳುವುದು ದ್ವಿಚಕ್ರವಾಹನ ಸವಾರರಿಗೆ ಮುಖ್ಯವಾಗಿ ಬಡವರು, ಹಿಂದುಳಿದವರಿಗೆ ತೊಂದರೆಯಾಗಿದೆ.<br /> <br /> ಅಧಿಕಾರಿಗಳು ಬಳಸುವ ಸರ್ಕಾರಿ ಐಶಾರಾಮಿ ವಾಹನಗಳು ಕಚೇರಿ ಕೆಲಸಗಳಿಗೆ ಸೀಮಿತವಲ್ಲದೆ, ಮಕ್ಕಳನ್ನು ಶಾಲೆಗೆ ಬಿಡುವುದು, ಅಂಗಡಿ–ಮಾಲುಗಳಿಗೆ ಸ್ವಂತಕ್ಕೆ ಬಳಸುವುದು ಘೋರ ಅಪರಾಧ ಎಂದೇಕೆ ಪರಿಗಣಿಸಬಾರದು.<br /> <br /> ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಹಿಂಬದಿಯ ಸವಾರರೇನು ಮುಂಬದಿಯ ಸವಾರರೂ ಹೆಲ್ಮೆಟ್ ಧರಿಸದೆ ಚಾಲನೆ ಮಾಡುವುದು ಸಾಮಾನ್ಯ. ನ್ಯಾಯಾಲಯದ ಆದೇಶವನ್ನು ಬದಲಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಬಳಸುವುದರ ಮೇಲೆ ರಿಯಾಯತಿ ತೋರಿಸಿ ಬಡಪಾಯಿ ದ್ವಿಚಕ್ರವಾಹನ ಸವಾರರಿಗೆ ಕರುಣೆ ತೋರಿಸುವರೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೆಲ್ಮೆಟ್ ಕಡ್ಡಾಯವೆಂಬ ಭೂತ ದ್ವಿಚಕ್ರವಾಹನ ಸವಾರರಿಗೆ ಭಯ ಮೂಡಿಸಿದೆ. ಹಿಂಬದಿಯ ಸವಾರರು ಧರಿಸದಿರಲು ಹಲವಾರು ಕಾರಣಗಳಿವೆ. ಕೇಳಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಅಪಘಾತಗಳು ಸಂಭವಿಸಿದಾಗ ತಲೆಯ ಸುರಕ್ಷತೆಯನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶ ಸ್ವಾಗತಾರ್ಹ.<br /> <br /> ಅಪಘಾತಗಳೇ ಸಂಭವಿಸದಂತೆ ಸುರಕ್ಷಿತ ರಸ್ತೆಗಳು ಮತ್ತು ಇತರೆ ಸೌಕರ್ಯಗಳನ್ನು ಸವಾರರಿಗೆ ಒದಗಿಸಬೇಕೆಂದು ಕಡ್ಡಾಯ ಮಾಡಿದ್ದರೆ ಚೆನ್ನಾಗಿತ್ತು. ನ್ಯಾಯಾಲಯದ ಆದೇಶವನ್ನೇ ಆಧಾರವಾಗಿಟ್ಟುಕೊಂಡು ದಾಖಲೆ ನಿರ್ಮಿಸುವಂತೆ ದಂಡವಸೂಲಿ, ಚಾಲನಾ ಪರವಾನಗಿ ಮುಟ್ಟುಗೋಲಿನಂತಹ ಕ್ರಮ ಕೈಗೊಳ್ಳುವುದು ದ್ವಿಚಕ್ರವಾಹನ ಸವಾರರಿಗೆ ಮುಖ್ಯವಾಗಿ ಬಡವರು, ಹಿಂದುಳಿದವರಿಗೆ ತೊಂದರೆಯಾಗಿದೆ.<br /> <br /> ಅಧಿಕಾರಿಗಳು ಬಳಸುವ ಸರ್ಕಾರಿ ಐಶಾರಾಮಿ ವಾಹನಗಳು ಕಚೇರಿ ಕೆಲಸಗಳಿಗೆ ಸೀಮಿತವಲ್ಲದೆ, ಮಕ್ಕಳನ್ನು ಶಾಲೆಗೆ ಬಿಡುವುದು, ಅಂಗಡಿ–ಮಾಲುಗಳಿಗೆ ಸ್ವಂತಕ್ಕೆ ಬಳಸುವುದು ಘೋರ ಅಪರಾಧ ಎಂದೇಕೆ ಪರಿಗಣಿಸಬಾರದು.<br /> <br /> ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ಹಿಂಬದಿಯ ಸವಾರರೇನು ಮುಂಬದಿಯ ಸವಾರರೂ ಹೆಲ್ಮೆಟ್ ಧರಿಸದೆ ಚಾಲನೆ ಮಾಡುವುದು ಸಾಮಾನ್ಯ. ನ್ಯಾಯಾಲಯದ ಆದೇಶವನ್ನು ಬದಲಿಸಲು ಸಾಧ್ಯವಿಲ್ಲದಿದ್ದರೂ ಅದನ್ನು ಬಳಸುವುದರ ಮೇಲೆ ರಿಯಾಯತಿ ತೋರಿಸಿ ಬಡಪಾಯಿ ದ್ವಿಚಕ್ರವಾಹನ ಸವಾರರಿಗೆ ಕರುಣೆ ತೋರಿಸುವರೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>