ಅಯೋಧ್ಯೆಯ ರಾಮಮಂದಿರ ಮತ್ತು ಬಾಬ್ರಿ ಮಸೀದಿಯ ಸಂಘರ್ಷದ ಕಿಚ್ಚಿನಲ್ಲಿ ಬೆಂದು ನರಳುತ್ತಿದ್ದ ಭರತಖಂಡದ ಸಾಮಾಜಿಕ ಜೀವನದಲ್ಲಿ ಇದೀಗ ಗೋಮಾಂಸದ ಹೆಸರಿನಲ್ಲಿ ಹಬ್ಬುತ್ತಿರುವ ಸಂಘರ್ಷದ ಕಿಚ್ಚು ಭಾರತೀಯರೆಲ್ಲರ ಬದುಕನ್ನು ದುರಂತಮಯಗೊಳಿಸುವುದರತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಾಸ್ತವವನ್ನು ಆಧರಿಸಿದ ವೈಜ್ಞಾನಿಕವಾದ ನಿಲುವುಗಳು ಮಾತ್ರ ದೇಶವನ್ನು ಕಾಪಾಡಬಲ್ಲುವು. ನಾಗೇಶ ಹೆಗಡೆಯವರು ಬರೆದ ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-ಮಯ’ ಲೇಖನ (ಪ್ರ.ವಾ., ಜೂನ್ 1) ಗೋವುಗಳ ಬಗ್ಗೆ ಪೂಜ್ಯ ಭಾವನೆಯನ್ನು ಹೊಂದಿರುವವರ ಕಣ್ಣನ್ನು ತೆರೆಸುವಂತಿದೆ.
-ಸಿ.ಪಿ. ನಾಗರಾಜ, ಬೆಂಗಳೂರು