ರಾಜ್ಯ ಸರ್ಕಾರವನ್ನು ಅಸಮರ್ಥ ಸರ್ಕಾರ ಎಂದು ಟೀಕಿಸಿದ್ದ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ನರೇಗಾ ಯೋಜನೆ ಅಡಿ ರಾಜ್ಯದ ಕೂಲಿ, ಕಾರ್ಮಿಕರಿಗೆ 1500 ಕೋಟಿ ಬಿಡುಗಡೆ ಮಾಡದ ಮೋದಿ ಸರ್ಕಾರ ದಿವಾಳಿ ಸರ್ಕಾರ ಎಂದು ಕುಟುಕಿದರು.
ನಾನು ಉತ್ತರ ಕರ್ನಾಟಕ ವಿರೋಧಿಯಲ್ಲ, ಬಜೆಟ್ ನಲ್ಲಿ ಪ್ರತಿ ಜಿಲ್ಲೆಗೂ ನೂರಾರು ಕೋಟಿ ಅನುದಾನ ನೀಡಿದ್ದೇನೆ ಎಂದು ಲೆಕ್ಕ ನೀಡಿದರು. ಸಾಲ ಮನ್ನಾ ಸೌಲಭ್ಯವನ್ನು ಈ ಭಾಗದ ರೈತರು ಪಡೆದುಕೊಂಡಿದ್ದಾರೆ’ ಎಂದರು.