ಸಿಯಾಚಿನ್ನಲ್ಲಿ ಹಿಮಪಾತಕ್ಕೆ ಸಿಕ್ಕು ಸಾವನ್ನಪ್ಪಿದ ಧಾರವಾಡದ ಬೆಟ್ಟದೂರಿನ ಯೋಧ ಹನುಮಂತಪ್ಪ ಕೊಪ್ಪದ ಅವರ ಬದುಕಿನಿಂದ ಸ್ಫೂರ್ತಿ ಪಡೆದಿರುವ ಚಿತ್ರ ‘ಮುಕ್ತಿ’. ಈ ಚಿತ್ರದ ನಿರ್ದೇಶನದ ಹೊಣೆ ಶಂಕರ್ ಅವರದು. ಇದೀಗ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ನಕುಲ್ ಗೋವಿಂದ್, ರಘುರಂಜನ್ ನಾಯಕರಾಗಿ ನಟಿಸಿದ್ದಾರೆ. ಕಿರುತೆರೆ ನಟಿ ಗಾನಾ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಗಡಿಯಲ್ಲಿ ನಿಂತು ಸಂಕಷ್ಟಗಳಿಗೆ ಎದೆಯೊಡ್ಡುತ್ತಾ ಶತ್ರುಗಳಿಂದ ದೇಶವನ್ನು ರಕ್ಷಣೆ ಮಾಡುವ ಯೋಧರ ಸಾವು–ಬದುಕಿನ ನಡುವಿನ ಹೋರಾಟವೇ ಕಥಾವಸ್ತು.
ಚಿತ್ರವನ್ನು ಸಿ.ಕೆ.ರಾಮಮೂರ್ತಿ ಮತ್ತು ಸತೀಶ್ ಯಾದವ್ ನಿರ್ಮಿಸಿದ್ದಾರೆ. ಹೇಮಂತ್ ಕುಮಾರ್ ಸಂಗೀತ ನಿರ್ದೇಶನ, ಎ.ರಾಜಶೇಖರ ರೆಡ್ಡಿ ಸಂಕಲನ ಹಾಗೂ ಸಿದ್ಧಾರ್ಥ್ ಅವರ ಛಾಯಾಗ್ರಹಣವಿದೆ.