ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ರನ್ ಔಟ್ ಆದ ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿದ ಹಿರಿಯ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರಿಗೆ ಅಭಿಷೇಕ್ ಸಿನ್ಹಾ ಎಂಬುವರು ಕೇಳಿದ ಪ್ರಶ್ನೆ ಇದು. ಹಾರ್ದಿಕ್ ಪಾಂಡ್ಯ ಅವರನ್ನು ಟೀಕಿಸಿ ಮಾಡಿರುವ ಟ್ವೀಟ್ನಲ್ಲಿ ಮಾಂಜ್ರೇಕರ್ ‘ಹುಂಬತನದಿಂದಾಗಿ ಹೀಗೆ ಆಗುತ್ತಿದೆ. ಇಂಥ ವರ್ತನೆ ಮುಂದುವರಿದರೆ ಪಾಠ ಕಲಿಯಬೇಕಾದೀತು’ ಎಂದು ಹೇಳಿದ್ದರು.