<p><strong>ಹುಬ್ಬಳ್ಳಿ</strong>: ಕೊನೆಯ ಸುತ್ತಿನಲ್ಲಿ ಎದುರಾದ ಕಠಿಣ ಸವಾಲನ್ನು ಮೆಟ್ಟಿನಿಂತ ಮರಾಠ ರೆಜಿಮೆಂಟ್ನ ವಾಸನ್ ಪಾಟೀಲ್ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದರು.</p>.<p>ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಕ್ಲಬ್ನ ರೇಂಜ್ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರು 238.4 ಪಾಯಿಂಟ್ಸ್ ಕಲೆ ಹಾಕಿ ಈ ಸಾಧನೆ ಮಾಡಿದರು. ಹೋದ ವರ್ಷ ಐ.ಎಸ್.ಎಸ್.ಎಫ್. ವಿಶ್ವಕಪ್ನಲ್ಲಿ ಪದಕ ಜಯಿಸಿದ್ದ ಅಮನ್ಪ್ರೀತ್ ಸಿಂಗ್ 232.9 ಪಾಯಿಂಟ್ಸ್ ಗಳಿಸಿ ಇಲ್ಲಿ ಬೆಳ್ಳಿ ತಮ್ಮದಾಗಿಸಿಕೊಂಡರು. ಎಸ್.ವಿ. ಜಿತೇಂದ್ರ 212.9 ಪಾಯಿಂಟ್ಸ್ ಕಲೆ ಹಾಕಿ ಕಂಚು ಗೆದ್ದರು.</p>.<p>ಒ.ಎನ್.ಜಿ.ಸಿ. ಪ್ರತಿನಿಧಿಸುವ ಅಮನ್ಪ್ರೀತ್ ಮತ್ತು ವಾಸನ್ ನಡುವೆ ಆರಂಭದ ಎರಡು ಸುತ್ತುಗಳಲ್ಲಿ ಕಠಿಣ ಪೈಪೋಟಿ ಕಂಡು ಬಂದಿತು. ಒಂದು ಪಾಯಿಂಟ್ ಅಂತರದಿಂದಷ್ಟೇ ವಾಸನ್ ಮುನ್ನಡೆಯಲ್ಲಿದ್ದರು. ಉಳಿದ 13 ಸುತ್ತುಗಳಲ್ಲಿ ವಾಸನ್ ಸ್ಥಿರತೆ ಕಾಯ್ದುಕೊಂಡು ಚಿನ್ನದ ಪದಕದ ಜೊತೆ ₹ 1 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಅಮನ್ಪ್ರೀತ್ಗೆ ₹ 50 ಸಾವಿರ, ಜಿತೇಂದ್ರಗೆ ₹ 25 ಸಾವಿರ ಲಭಿಸಿತು.</p>.<p>ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ವಾಸನ್ ಜಯಿಸಿದ ನಾಲ್ಕನೇ ಪದಕವಿದು. 2014 ಮತ್ತು 2016ರಲ್ಲಿ ಪುಣೆಯಲ್ಲಿ, 2016ರಲ್ಲಿ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಅವರು ಪದಕ ಪಡೆದಿದ್ದರು.</p>.<p>‘ಅಂತರರಾಷ್ಟ್ರೀಯ ಶೂಟರ್ಗಳು ಭಾಗವಹಿಸಿದ್ದರಿಂದ ಚುರುಕಿನ ಪೈಪೋಟಿ ಇರುತ್ತದೆ ಎಂಬುದು ಗೊತ್ತಿತ್ತು. ಆದ್ದರಿಂದ ಕಠಿಣ ಅಭ್ಯಾಸ ಮಾಡಿದ್ದೆ. 2020ರ ಒಲಿಂಪಿಕ್ಸ್ಗೆ ಇನ್ನೂ ಚೆನ್ನಾಗಿ ತಯಾರಿ ನಡೆಸಲು ಇಲ್ಲಿ ಗೆದ್ದ ಪದಕ ಪ್ರೇರಣೆಯಾಗಲಿದೆ’ ಎಂದು ವಾಸನ್ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.</p>.<p>ಫೈನಲ್ಗೆ ಅರ್ಹತೆ ಪಡೆದಿದ್ದ ಉತ್ತರ ಪ್ರದೇಶದ ಎಸ್. ಖುಷ್ (194 ಪಾಂ.), ಸೌರಭ್ (174.2), ಕರ್ನಾಟಕದ ಸಾಗರ ಸಿಂಗ್ (153.7), ಈ. ಗಿರಿಧರ್ (131.6) ಮತ್ತು ಮಹಾರಾಷ್ಟ್ರದ ರಾಹುಲ್ ಹಿವಾರಿ (107.6) ಕ್ರಮವಾಗಿ ನಾಲ್ಕರಿಂದ ಎಂಟರವರೆಗೆ ಸ್ಥಾನ ಪಡೆದರು.</p>.<p><strong>ಅರ್ಹತೆ ಪಡೆಯದ ಪ್ರಕಾಶ್: </strong>ಒಲಿಂಪಿಯನ್ ಕರ್ನಾಟಕದ ಪಿ.ಎನ್. ಪ್ರಕಾಶ್ ಅವರು ಫೈನಲ್ ಪ್ರವೇಶಿಸಲು ವಿಫಲರಾದರು.</p>.<p>ಹೆಚ್ಚು ಪಾಯಿಂಟ್ಸ್ ಗಳಿಸಿದ ಮೊದಲ ಎಂಟು ಶೂಟರ್ಗಳು ಫೈನಲ್ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರಕಾಶ್ ಅರ್ಹತಾ ಸುತ್ತಿನಲ್ಲಿ 378 ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರು.</p>.<p>‘ಫಿಟ್ನೆಸ್ ಸಮಸ್ಯೆ ಇದ್ದ ಕಾರಣ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಏಷ್ಯನ್ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಅಭ್ಯಾಸ ಆರಂಭಿಸುತ್ತೇನೆ’ ಎಂದು ಪ್ರಕಾಶ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಕೊನೆಯ ಸುತ್ತಿನಲ್ಲಿ ಎದುರಾದ ಕಠಿಣ ಸವಾಲನ್ನು ಮೆಟ್ಟಿನಿಂತ ಮರಾಠ ರೆಜಿಮೆಂಟ್ನ ವಾಸನ್ ಪಾಟೀಲ್ ರಾಷ್ಟ್ರೀಯ ಮುಕ್ತ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದರು.</p>.<p>ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಕ್ಲಬ್ನ ರೇಂಜ್ನಲ್ಲಿ ನಡೆದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಅವರು 238.4 ಪಾಯಿಂಟ್ಸ್ ಕಲೆ ಹಾಕಿ ಈ ಸಾಧನೆ ಮಾಡಿದರು. ಹೋದ ವರ್ಷ ಐ.ಎಸ್.ಎಸ್.ಎಫ್. ವಿಶ್ವಕಪ್ನಲ್ಲಿ ಪದಕ ಜಯಿಸಿದ್ದ ಅಮನ್ಪ್ರೀತ್ ಸಿಂಗ್ 232.9 ಪಾಯಿಂಟ್ಸ್ ಗಳಿಸಿ ಇಲ್ಲಿ ಬೆಳ್ಳಿ ತಮ್ಮದಾಗಿಸಿಕೊಂಡರು. ಎಸ್.ವಿ. ಜಿತೇಂದ್ರ 212.9 ಪಾಯಿಂಟ್ಸ್ ಕಲೆ ಹಾಕಿ ಕಂಚು ಗೆದ್ದರು.</p>.<p>ಒ.ಎನ್.ಜಿ.ಸಿ. ಪ್ರತಿನಿಧಿಸುವ ಅಮನ್ಪ್ರೀತ್ ಮತ್ತು ವಾಸನ್ ನಡುವೆ ಆರಂಭದ ಎರಡು ಸುತ್ತುಗಳಲ್ಲಿ ಕಠಿಣ ಪೈಪೋಟಿ ಕಂಡು ಬಂದಿತು. ಒಂದು ಪಾಯಿಂಟ್ ಅಂತರದಿಂದಷ್ಟೇ ವಾಸನ್ ಮುನ್ನಡೆಯಲ್ಲಿದ್ದರು. ಉಳಿದ 13 ಸುತ್ತುಗಳಲ್ಲಿ ವಾಸನ್ ಸ್ಥಿರತೆ ಕಾಯ್ದುಕೊಂಡು ಚಿನ್ನದ ಪದಕದ ಜೊತೆ ₹ 1 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು. ಅಮನ್ಪ್ರೀತ್ಗೆ ₹ 50 ಸಾವಿರ, ಜಿತೇಂದ್ರಗೆ ₹ 25 ಸಾವಿರ ಲಭಿಸಿತು.</p>.<p>ರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ ವಾಸನ್ ಜಯಿಸಿದ ನಾಲ್ಕನೇ ಪದಕವಿದು. 2014 ಮತ್ತು 2016ರಲ್ಲಿ ಪುಣೆಯಲ್ಲಿ, 2016ರಲ್ಲಿ ನವದೆಹಲಿಯಲ್ಲಿ ನಡೆದ ಟೂರ್ನಿಯಲ್ಲಿ ಅವರು ಪದಕ ಪಡೆದಿದ್ದರು.</p>.<p>‘ಅಂತರರಾಷ್ಟ್ರೀಯ ಶೂಟರ್ಗಳು ಭಾಗವಹಿಸಿದ್ದರಿಂದ ಚುರುಕಿನ ಪೈಪೋಟಿ ಇರುತ್ತದೆ ಎಂಬುದು ಗೊತ್ತಿತ್ತು. ಆದ್ದರಿಂದ ಕಠಿಣ ಅಭ್ಯಾಸ ಮಾಡಿದ್ದೆ. 2020ರ ಒಲಿಂಪಿಕ್ಸ್ಗೆ ಇನ್ನೂ ಚೆನ್ನಾಗಿ ತಯಾರಿ ನಡೆಸಲು ಇಲ್ಲಿ ಗೆದ್ದ ಪದಕ ಪ್ರೇರಣೆಯಾಗಲಿದೆ’ ಎಂದು ವಾಸನ್ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.</p>.<p>ಫೈನಲ್ಗೆ ಅರ್ಹತೆ ಪಡೆದಿದ್ದ ಉತ್ತರ ಪ್ರದೇಶದ ಎಸ್. ಖುಷ್ (194 ಪಾಂ.), ಸೌರಭ್ (174.2), ಕರ್ನಾಟಕದ ಸಾಗರ ಸಿಂಗ್ (153.7), ಈ. ಗಿರಿಧರ್ (131.6) ಮತ್ತು ಮಹಾರಾಷ್ಟ್ರದ ರಾಹುಲ್ ಹಿವಾರಿ (107.6) ಕ್ರಮವಾಗಿ ನಾಲ್ಕರಿಂದ ಎಂಟರವರೆಗೆ ಸ್ಥಾನ ಪಡೆದರು.</p>.<p><strong>ಅರ್ಹತೆ ಪಡೆಯದ ಪ್ರಕಾಶ್: </strong>ಒಲಿಂಪಿಯನ್ ಕರ್ನಾಟಕದ ಪಿ.ಎನ್. ಪ್ರಕಾಶ್ ಅವರು ಫೈನಲ್ ಪ್ರವೇಶಿಸಲು ವಿಫಲರಾದರು.</p>.<p>ಹೆಚ್ಚು ಪಾಯಿಂಟ್ಸ್ ಗಳಿಸಿದ ಮೊದಲ ಎಂಟು ಶೂಟರ್ಗಳು ಫೈನಲ್ಗೆ ಅರ್ಹತೆ ಪಡೆಯುತ್ತಾರೆ. ಆದರೆ, ಪ್ರಕಾಶ್ ಅರ್ಹತಾ ಸುತ್ತಿನಲ್ಲಿ 378 ಪಾಯಿಂಟ್ಸ್ ಗಳಿಸಿ ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಟ್ಟರು.</p>.<p>‘ಫಿಟ್ನೆಸ್ ಸಮಸ್ಯೆ ಇದ್ದ ಕಾರಣ ತಯಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಲ್ಲಿ ಉತ್ತಮ ಪ್ರದರ್ಶನ ನೀಡಲು ಆಗಲಿಲ್ಲ. ಏಷ್ಯನ್ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಅಭ್ಯಾಸ ಆರಂಭಿಸುತ್ತೇನೆ’ ಎಂದು ಪ್ರಕಾಶ್ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>