ಈ ಪಂದ್ಯದ ವೇಳೆ ಪಿಚ್ ಸಾಕಷ್ಟು ಪುಟಿಯುತ್ತಿತ್ತು. ಇದು ವಿವಾ ದಕ್ಕೆ ಕಾರಣವಾಗಿತ್ತು. ಅದಕ್ಕಾಗಿ ಆಗ 28 ನಿಮಿಷಗಳ ಆಟ ಸ್ಥಗಿತಗೊಂಡಿತ್ತು. ಈಗ ಪಂಜಾಬ್ ಅಲ್ಪ ಮೊತ್ತಕ್ಕೆ ಕುಸಿದಿದ್ದು, ‘ಬ್ಯಾಟ್ಸ್ಮನ್ಗಳು ಕಳಪೆ ಆಟವಾಡಿದರು’ ಎಂದು ಪಂಜಾಬ್ ಕೋಚ್್ ಭೂಪಿಂದರ್ ಸಿಂಗ್ ಹೇಳಿದ್ದಾರೆ. ದೆಹಲಿ ಭಾನುವಾರದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 46 ರನ್ ಕಲೆ ಹಾಕಿದೆ.
ವಿದರ್ಭ ಎದುರಿನ ಪಂದ್ಯ ವಿವಾ ದಕ್ಕೆ ಕಾರಣವಾಗಿದ್ದರಿಂದ ರಣಜಿಯ ಉಳಿದ ಪಂದ್ಯಗಳಲ್ಲಿ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಆಡಿಸುವುದಾಗಿ ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಹೇಳಿತ್ತು. ಆದರೆ, ಕೊನೆಯಲ್ಲಿ ಬದಲಾವಣೆ ಮಾಡಿ ಮತ್ತೆ ರೋಷನರ ಅಂಗಳದಲ್ಲಿಯೇ ಪಂದ್ಯಗಳನ್ನು ಆಯೋಜಿಸಿದೆ.