<p><strong>ನವದೆಹಲಿ</strong>: ಡೆಹ್ರಾಡೂನ್ನ ‘ಅಭಿಮನ್ಯು ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣ’ದಲ್ಲಿ ಬಂಗಾಳ ಮತ್ತು ಉತ್ತರಾಖಂಡ ತಂಡಗಳ ನಡುವೆ ಮಂಗಳವಾರ ಆರಂಭವಾಗಲಿರುವ ರಣಜಿ ಕ್ರಿಕೆಟ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ.</p>.<p>ಬಂಗಾಳ ತಂಡದ ಬ್ಯಾಟರ್ ಅಭಿಮನ್ಯು ಈಶ್ವರನ್, ತಮ್ಮದೇ ಹೆಸರಿನ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಈ ಕ್ರೀಡಾಂಗಣವನ್ನು ನಿರ್ಮಿಸಿರುವುದು ಅಭಿಮನ್ಯು ಅವರ ಅಪ್ಪ ರಂಗನಾಥನ್ ಪರಮೇಶ್ವರನ್ ಈಶ್ವರನ್. </p>.<p>ರಂಗನಾಥನ್ ಅವರು ಕ್ರೀಡಾಂಗಣ ನಿರ್ಮಾಣಕ್ಕಾಗಿ 2005 ರಲ್ಲಿ ಡೆಹ್ರಾಡೂನ್ನಲ್ಲಿ ಜಮೀನು ಖರೀದಿಸಿದ್ದರು. ಸ್ವಂತ ಖರ್ಚಿನಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರು. ಬಳಿಕ ಮಗನ ಹೆಸರನ್ನೇ ಇಟ್ಟಿದ್ದರು. ಅಪ್ಪ ಕಟ್ಟಿಸಿರುವ ಕ್ರೀಡಾಂಗಣದಲ್ಲಿ ಆಡುವ ಅಪೂರ್ವ ಅವಕಾಶ ಇದೀಗ ಮಗನಿಗೆ ದೊರೆತಿದೆ.</p>.<p>‘ನಾನು ಆಡಿ ಬೆಳೆದ ಅಂಗಳದಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಹೆಮ್ಮೆಯ ವಿಚಾರ. ತಂದೆಯವರು ಕ್ರಿಕೆಟ್ ಮೇಲೆ ಹೊಂದಿದ್ದ ಪ್ರೀತಿಯಿಂದ ಈ ಕ್ರೀಡಾಂಗಣ ನಿರ್ಮಾಣವಾಗಿದೆ’ ಎಂದು 27 ವರ್ಷದ ಅಭಿಮನ್ಯು ಪ್ರತಿಕ್ರಿಯಿಸಿದ್ದಾರೆ.</p>.<p>‘ಕ್ರೀಡಾಂಗಣ ನಿರ್ಮಾಣ 2006 ರಲ್ಲಿ ಆರಂಭವಾಗಿತ್ತು. ಈಗಲೂ ಆಧುನೀಕರಣಕ್ಕಾಗಿ ಹಣ ಖರ್ಚು ಮಾಡುತ್ತಿದ್ದೇನೆ. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಕ್ರೀಡಾಂಗಣ ನಿರ್ಮಿಸಿದ್ದೇನೆಯೇ ಹೊರತು, ಮಗನಿಗಾಗಿ ಅಲ್ಲ’ ಎಂಬುದು ರಂಗನಾಥನ್ ಹೇಳಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಡೆಹ್ರಾಡೂನ್ನ ‘ಅಭಿಮನ್ಯು ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣ’ದಲ್ಲಿ ಬಂಗಾಳ ಮತ್ತು ಉತ್ತರಾಖಂಡ ತಂಡಗಳ ನಡುವೆ ಮಂಗಳವಾರ ಆರಂಭವಾಗಲಿರುವ ರಣಜಿ ಕ್ರಿಕೆಟ್ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಲಿದೆ.</p>.<p>ಬಂಗಾಳ ತಂಡದ ಬ್ಯಾಟರ್ ಅಭಿಮನ್ಯು ಈಶ್ವರನ್, ತಮ್ಮದೇ ಹೆಸರಿನ ಕ್ರೀಡಾಂಗಣದಲ್ಲಿ ಆಡಲಿದ್ದಾರೆ. ಈ ಕ್ರೀಡಾಂಗಣವನ್ನು ನಿರ್ಮಿಸಿರುವುದು ಅಭಿಮನ್ಯು ಅವರ ಅಪ್ಪ ರಂಗನಾಥನ್ ಪರಮೇಶ್ವರನ್ ಈಶ್ವರನ್. </p>.<p>ರಂಗನಾಥನ್ ಅವರು ಕ್ರೀಡಾಂಗಣ ನಿರ್ಮಾಣಕ್ಕಾಗಿ 2005 ರಲ್ಲಿ ಡೆಹ್ರಾಡೂನ್ನಲ್ಲಿ ಜಮೀನು ಖರೀದಿಸಿದ್ದರು. ಸ್ವಂತ ಖರ್ಚಿನಲ್ಲಿ ಕ್ರೀಡಾಂಗಣ ನಿರ್ಮಿಸಿದ್ದರು. ಬಳಿಕ ಮಗನ ಹೆಸರನ್ನೇ ಇಟ್ಟಿದ್ದರು. ಅಪ್ಪ ಕಟ್ಟಿಸಿರುವ ಕ್ರೀಡಾಂಗಣದಲ್ಲಿ ಆಡುವ ಅಪೂರ್ವ ಅವಕಾಶ ಇದೀಗ ಮಗನಿಗೆ ದೊರೆತಿದೆ.</p>.<p>‘ನಾನು ಆಡಿ ಬೆಳೆದ ಅಂಗಳದಲ್ಲಿ ರಣಜಿ ಪಂದ್ಯ ಆಡುತ್ತಿರುವುದು ಹೆಮ್ಮೆಯ ವಿಚಾರ. ತಂದೆಯವರು ಕ್ರಿಕೆಟ್ ಮೇಲೆ ಹೊಂದಿದ್ದ ಪ್ರೀತಿಯಿಂದ ಈ ಕ್ರೀಡಾಂಗಣ ನಿರ್ಮಾಣವಾಗಿದೆ’ ಎಂದು 27 ವರ್ಷದ ಅಭಿಮನ್ಯು ಪ್ರತಿಕ್ರಿಯಿಸಿದ್ದಾರೆ.</p>.<p>‘ಕ್ರೀಡಾಂಗಣ ನಿರ್ಮಾಣ 2006 ರಲ್ಲಿ ಆರಂಭವಾಗಿತ್ತು. ಈಗಲೂ ಆಧುನೀಕರಣಕ್ಕಾಗಿ ಹಣ ಖರ್ಚು ಮಾಡುತ್ತಿದ್ದೇನೆ. ಕ್ರಿಕೆಟ್ ಮೇಲಿನ ಪ್ರೀತಿಯಿಂದ ಕ್ರೀಡಾಂಗಣ ನಿರ್ಮಿಸಿದ್ದೇನೆಯೇ ಹೊರತು, ಮಗನಿಗಾಗಿ ಅಲ್ಲ’ ಎಂಬುದು ರಂಗನಾಥನ್ ಹೇಳಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>