2008ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆ್ಯಂಡ್ರ್ಯೂ ಸೈಮಂಡ್ಸ್ ಅವರಿಗೆ ಹರಭಜನ್ ಸಿಂಗ್ ‘ಮಂಕಿ’ ಎಂದು ಬೈದಿದ್ದರು ಎಂದು ಆಸ್ಟ್ರೇಲಿಯಾ ತಂಡವು ದೂರಿತ್ತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಮಂಕಿಗೇಟ್ ವಿವಾದವೆಂದೇ ಹೆಸರಾಯಿತು. ಜನಾಂಗೀಯ ನಿಂದನೆಯ ತಿರುವು ಪಡೆದಿತ್ತು. ಆಗ ಭಾರತ ತಂಡಕ್ಕೆ ಅನಿಲ್ ಕುಂಬ್ಳೆ ನಾಯಕರಾಗಿದ್ದರು. ಐಸಿಸಿಯು ಹರಭಜನ್, ಸೈಮಂಡ್ಸ್ ಅವರನ್ನು ವಿಚಾರಣೆ ಮಾಡಿತ್ತು. ಹರಭಜನ್ ನಿಷೇಧ ಶಿಕ್ಷೆಯನ್ನೂ ಅನುಭವಿಸಬೇಕಾಯಿತು.