ಮುಂಬೈ: ವೇಗದ ಬೌಲರ್ ಅಶೋಕ್ ದಿಂಡಾ ಅವರು ಈ ಬಾರಿಯ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಗೋವಾ ತಂಡದ ಪರ ಆಡಲಿದ್ದಾರೆ. ಬಂಗಾಳ ತಂಡದಲ್ಲಿ ಕಳೆದ ವರ್ಷ ಅವರನ್ನು ಕಡೆಗಣಿಸಲಾಗಿತ್ತು.ಇದರಿಂದ ಬೇಸರಗೊಂಡ ಅವರು ತಾನು ರಾಜಕೀಯದ ಬಲಿಪಶು ಎಂದು ಹೇಳಿಕೊಂಡಿದ್ದರು. ಬಂಗಾಳ ತಂಡದ ಪರವಾಗಿ ಇನ್ನು ಆಡುವುದಿಲ್ಲ ಎಂದೂ ತಿಳಿಸಿದ್ದರು.