ಏಷ್ಯಾ ಕಪ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಪಾಕ್ಗೆ ಬರುವಂತೆ ಪಿಸಿಬಿ ಇತ್ತೀಚೆಗೆ ಆಹ್ವಾನ ನೀಡಿತ್ತು. ‘ಬಿನ್ನಿ, ಶುಕ್ಲಾ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆ.2 ರಂದು ನಡೆಯಲಿರುವ ಭಾರತ– ಪಾಕಿಸ್ತಾನ ಪಂದ್ಯ ವೀಕ್ಷಿಸಲಿದ್ದಾರೆ. ಸೆ.3 ಕ್ಕೆ ಮೂವರೂ ಭಾರತಕ್ಕೆ ವಾಪಸಾಗುವರು. ಆ ಬಳಿಕ ಬಿಸಿಸಿಐ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ವಾಘಾ ಗಡಿ ಮೂಲಕ ಲಾಹೋರ್ಗೆ ಪ್ರಯಾಣಿಸುವರು’ ಎಂದು ಮಂಡಳಿಯ ಮೂಲಗಳು ಹೇಳಿವೆ.