ಇದರಿಂದಾಗಿ ಬೀಚನಹಳ್ಳಿ ಮಾರ್ಗ ಬಂದ್ ಆಗಿದ್ದು, ಎಚ್.ಡಿ.ಕೋಟೆ ಹ್ಯಾಂಡ್ಪೋಸ್ಟ್ನಿಂದ ಎನ್. ಬೇಗೂರು ಕಡೆಗೆ ಹೋಗುವ ವಾಹನಗಳು ಸರಗೂರು ಮಾರ್ಗವಾಗಿ ಸಂಚರಿಸಬೇಕಾಗಿದೆ. ಇದರಿಂದಾಗಿ ಬಿದರಹಳ್ಳಿ, ಹೊಸ ಬಿದರಹಳ್ಳಿ, ತೆರಣಿಮುಂಟಿ, ಬಸಾಪುರ, ಮೊಸರ ಹಳ್ಳ, ಕೆಂಚನಹಳ್ಳಿ, ಮೂರ್ ಬಂದ್, ಬೋರೇದೇವರಮುಂಟಿ, ಭೀಮನಕೊಲ್ಲಿ, ಎನ್.ಬೇಗೂರು, ಗೆಂಡತ್ತೂರು, ಇನ್ನೂ ಹಲವಾರು ಗ್ರಾಮಗಳ ಜನತೆಗೆ ತೀವ್ರ ಅನನುಕೂಲವಾಗಿದೆ.