ಚಿತ್ರದುರ್ಗ: ಬೆಂಗಳೂರಿನ ದೀಪಾಂಜಲಿ ಅಂಧರ ತಂಡವು ಇಲ್ಲಿ ನಡೆಯುತ್ತಿರುವ ಅಂಧರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇಲ್ಲಿಯ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ತಾಲ್ಲೂಕಿನ ಮಾಳಪ್ಪನಹಟ್ಟಿಯ ತೀಕ್ಷ್ಣ ಅಂಧ ಮಕ್ಕಳ ವಸತಿಶಾಲೆ ಆಯೋಜಿಸಿರುವ ಟೂರ್ನಿಯಲ್ಲಿ ಈ ತಂಡ ರಾಣೆಬೆನ್ನೂರು ತಂಡವನ್ನು 2–1ರಿಂದ ಮಣಿಸಿತು.