ಚೆನ್ನೈ: ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ಗೆ ಮರಳಿರುವ ಕಾರಣ ನಾಯಕತ್ವ ವಹಿಸುವ ತಮ್ಮ ಆಸೆ ಕೈಗೂಡದೇ ಹೋಗಬಹುದೆಂಬ ನೋವು ಜಸ್ಪ್ರೀತ್ ಬೂಮ್ರಾ ಅವರಿಗೆ ಕಾಡಿರಬಹುದು ಎಂದು ಭಾರತ ತಂಡದ ಮಾಜಿ ಆಟಗಾರ ಕೆ.ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್ ಟೈಟನ್ಸ್ಗೆ ಎರಡು ವರ್ಷ ಆಡಿದ ನಂತರ ಹಾರ್ದಿಕ್ ಅವರು ಭಾನುವಾರ ಮುಂಬೈ ತಂಡಕ್ಕೆ ವಾಪಸಾಗಿದ್ದಾರೆ. 2015 ರಿಂದ 2022ರವರೆಗೆ ಅವರು ಮುಂಬೈ ತಂಡದಲ್ಲಿದ್ದರು.
ಗುಜರಾತ್ಗೆ ದೊಡ್ಡ ಮೊತ್ತ ಪಾವ ತಿಸಿ ಮುಂಬೈ ತಂಡ ಹಾರ್ದಿಕ್ ಅವರನ್ನು ಪಡೆದ ಬಳಿಕ ಬೂಮ್ರಾ ಅವರು ಇನ್ಸ್ಟಾ ಸ್ಟೋರಿಯಲ್ಲಿ ‘ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರವಾಗುತ್ತದೆ’ ಎಂದು ಒಗಟಿನ ರೀತಿ ಸಂದೇಶ ಹಾಕಿದ್ದರು.