ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ.ನಾಯ್ಡು ಟ್ರೋಫಿ: ಮನೋಜ್‌ ಅಮೋಘ ಶತಕ

ಸಿ.ಕೆ.ನಾಯ್ಡು ಟ್ರೋಫಿ: ಹಿಮಾಚಲಕ್ಕೆ 251 ರನ್‌ ಗೆಲವಿನ ಗುರಿ
Last Updated 24 ಜನವರಿ 2023, 18:37 IST
ಅಕ್ಷರ ಗಾತ್ರ

ಮೈಸೂರು: ಮನೋಜ್‌ ಭಾಂಡಗೆ ಸಿಡಿಸಿದ ಅಮೋಘ ಶತಕದ (102 ರನ್‌) ಬಲದಿಂದ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕಿತು.

ಇಲ್ಲಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡವು ಮಂಗಳವಾರ 89.4 ಓವರ್‌ಗಳಲ್ಲಿ 299 ರನ್ ಗಳಿಸಿತು. ತಾಳ್ಮೆಯ ಆಟವಾಡಿದ ಮನೋಜ್, ನಾಯಕ ಕಿಶನ್‌ ಎಸ್. ಬಿದರೆ (49) ಹಾಗೂ ವಿದ್ಯಾಧರ ಪಾಟೀಲ (54) ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್‌: ಕರ್ನಾಟಕ 166. ಹಿಮಾಚಲ ಪ್ರದೇಶ 67.4 ಓವರ್‌ಗಳಲ್ಲಿ 214 (ಆರ್‌.ಐ.ಠಾಕೂರ್‌ 77, ಎ.ಎಸ್‌.ಜಾಮ್ವಾಲ್‌ 57, ಎಂ.ಎಸ್‌.ಭಾಂಡಗೆ 47ಕ್ಕೆ 4). ಎರಡನೇ ಇನಿಂಗ್ಸ್‌: ಕರ್ನಾಟಕ 89.4 ಓವರ್‌ಗಳಲ್ಲಿ 299 (ಮನೋಜ್‌ ಭಾಂಡಗೆ 102, ವಿದ್ಯಾಧರ ಪಾಟೀಲ್‌ 54, ಮುಕುಲ್ ನೇಗಿ 80ಕ್ಕೆ 4)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT