ನವದೆಹಲಿ: ರಾಂಚಿಯಲ್ಲಿ ಇದೇ 31ರಿಂದ ಆರಂಭವಾಗಲಿರುವ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಮೂರು ತಂಡಗಳನ್ನು ಗುರುವಾರ ಆಯ್ಕೆ ಮಾಡಲಾಯಿತು. ಕರ್ನಾಟಕದ ಯುವ ಆಟಗಾರ ದೇವದತ್ತ ಪಡಿಕ್ಕಲ್, ಮಯಂಕ್ ಅಗರವಾಲ್ ಮತ್ತು ಕೃಷ್ಣಪ್ಪ ಗೌತಮ್ ಸ್ಥಾನ ಪಡೆದಿದ್ಧಾರೆ.
ಭಾರತ ಎ ತಂಡಕ್ಕೆ ಹನುಮವಿಹಾರಿ, ಬಿ ತಂಡಕ್ಕೆ ಪಾರ್ಥಿವ್ ಪಟೇಲ್ ಮತ್ತು ಸಿ ತಂಡಕ್ಕೆ ಯುವ ಆಟಗಾರ ಶುಭಮನ್ ಗಿಲ್ ಅವರನ್ನ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಮುಂಬೈನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ತಂಡಗಳನ್ನು ಪ್ರಕಟಿಸಲಾಯಿತು. ತಮಿಳುನಾಡಿನ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರು ಗಿಲ್ ನಾಯಕತ್ವದ ತಂಡದಲ್ಲಿ ಆಡಲಿದ್ದಾರೆ.
ತಂಡಗಳು:
ಭಾರತ ‘ಎ’: ಹನುಮವಿಹಾರಿ (ನಾಯಕ), ದೇವದತ್ತ ಪಡಿಕ್ಕಲ್, ಎ.ಆರ್. ಈಶ್ವರನ್, ವಿಷ್ಣು ವಿನೋದ್, ಅಮನದೀಪ್ ಖರೆ, ಅಭಿಷೇಕ್ ರಾಮನ್, ಇಶಾನ್ ಕಿಶನ್ (ವಿಕೆಟ್ಕೀಪರ್), ಶಹಬಾಜ್ ಅಹಮದ್, ರವಿ ಬಿಷ್ಣೋಯ್, ಆರ್. ಅಶ್ವಿನ್, ಜಯದೇವ್ ಉನದ್ಕತ್, ಸಂದೀಪ್ ವಾರಿಯರ್, ಸಿದ್ಧಾರ್ಥ್ ಕೌಲ್, ಭಾರ್ಗವ್ ಮೆರೈ.