<p><strong>ವಡೋದರ (ಪಿಟಿಐ):</strong> ಬರೋಡಾ ಕ್ರಿಕೆಟ್ ತಂಡದ ಆಟಗಾರ ವಿಷ್ಣು ಸೋಳಂಕಿ ಇತ್ತೀಚೆಗಷ್ಟೇ ಪುತ್ರಿಯ ಸಾವಿನ ಶೋಕ ಅನುಭವಿಸಿದ್ದರು. ಇದೀಗ ಅವರಿಗೆ ಪಿತೃವಿಯೋಗದ ದುಃಖ ಅವರನ್ನು ಕಾಡಿದೆ.</p>.<p>ಭಾನುವಾರ ಅವರ ತಂದೆ ನಿಧನರಾಗಿದ್ದಾರೆ. ಆದರೆ ಎದೆಗುಂದದ ವಿಷ್ಣು ರಣಜಿ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ.</p>.<p>‘ವಿಷ್ಣು ತಂದೆ ನಿಧನರಾಗಿದ್ದಾರೆ. ಆದರೆ, ವಿಷ್ಣು ಅವರು ವಡೋದರಕ್ಕೆ ಬರುತ್ತಿಲ್ಲ. ಮೂರನೇ ಪಂದ್ಯ ಆಡಲು ನಿರ್ಧರಿಸಿರುವ ಅವರು ಬಯೋಬಬಲ್ ತೊರೆದು ಬರುತ್ತಿಲ್ಲ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.</p>.<p>ಫೆಬ್ರುವರಿ 10ರಂದು ಅವರ ನವಜಾತ ಹೆಣ್ಣುಮಗು ಸಾವಿಗೀಡಾಯಿತು. ಆದರೆ ಈ ದುಃಖವನ್ನು ನುಂಗಿಕೊಂಡು ಟೂರ್ನಿಯ ಎರಡನೇ ಪಂದ್ಯದಲ್ಲಿ ಆಡಿದ್ದ ವಿಷ್ಣು ಚಂಡೀಗಡ ತಂಡದ ಎದುರು ಶತಕ ಬಾರಿಸಿದ್ದರು. ಪಂದ್ಯದ ಕೊನೆಯ ದಿನವಾದ ಭಾನುವಾರ ತಂದೆಯ ನಿಧನದ ಸುದ್ದಿ ಅವರಿಗೆ ಸಿಕ್ಕಿತ್ತು.</p>.<p>‘ತಮ್ಮ ಹೆಣ್ಣುಮಗು ತೀರಿಕೊಂಡ ನಂತರ ಅವರು ತಂಡಕ್ಕೆ ಮರಳಿದ್ದರು. ಆದರೆ ಬಯೋಬಬಲ್ ನಿಯಮದ ಪ್ರಕಾರ ಕ್ವಾರಂಟೈನ್ಗೆ ತೆರಳಿದ್ದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದರು‘ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಭುವನೇಶ್ವರದಲ್ಲಿ ಮಾರ್ಚ್ 3ರಿಂದ ನಡೆಯಲಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಬರೋಡಾ ತಂಡವು ಹೈದರಾಬಾದ್ ಎದುರು ಆಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡೋದರ (ಪಿಟಿಐ):</strong> ಬರೋಡಾ ಕ್ರಿಕೆಟ್ ತಂಡದ ಆಟಗಾರ ವಿಷ್ಣು ಸೋಳಂಕಿ ಇತ್ತೀಚೆಗಷ್ಟೇ ಪುತ್ರಿಯ ಸಾವಿನ ಶೋಕ ಅನುಭವಿಸಿದ್ದರು. ಇದೀಗ ಅವರಿಗೆ ಪಿತೃವಿಯೋಗದ ದುಃಖ ಅವರನ್ನು ಕಾಡಿದೆ.</p>.<p>ಭಾನುವಾರ ಅವರ ತಂದೆ ನಿಧನರಾಗಿದ್ದಾರೆ. ಆದರೆ ಎದೆಗುಂದದ ವಿಷ್ಣು ರಣಜಿ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಆಡಲು ಸಿದ್ಧರಾಗಿದ್ದಾರೆ.</p>.<p>‘ವಿಷ್ಣು ತಂದೆ ನಿಧನರಾಗಿದ್ದಾರೆ. ಆದರೆ, ವಿಷ್ಣು ಅವರು ವಡೋದರಕ್ಕೆ ಬರುತ್ತಿಲ್ಲ. ಮೂರನೇ ಪಂದ್ಯ ಆಡಲು ನಿರ್ಧರಿಸಿರುವ ಅವರು ಬಯೋಬಬಲ್ ತೊರೆದು ಬರುತ್ತಿಲ್ಲ’ ಎಂದು ಬರೋಡಾ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಅಜಿತ್ ಲೆಲೆ ತಿಳಿಸಿದ್ದಾರೆ.</p>.<p>ಫೆಬ್ರುವರಿ 10ರಂದು ಅವರ ನವಜಾತ ಹೆಣ್ಣುಮಗು ಸಾವಿಗೀಡಾಯಿತು. ಆದರೆ ಈ ದುಃಖವನ್ನು ನುಂಗಿಕೊಂಡು ಟೂರ್ನಿಯ ಎರಡನೇ ಪಂದ್ಯದಲ್ಲಿ ಆಡಿದ್ದ ವಿಷ್ಣು ಚಂಡೀಗಡ ತಂಡದ ಎದುರು ಶತಕ ಬಾರಿಸಿದ್ದರು. ಪಂದ್ಯದ ಕೊನೆಯ ದಿನವಾದ ಭಾನುವಾರ ತಂದೆಯ ನಿಧನದ ಸುದ್ದಿ ಅವರಿಗೆ ಸಿಕ್ಕಿತ್ತು.</p>.<p>‘ತಮ್ಮ ಹೆಣ್ಣುಮಗು ತೀರಿಕೊಂಡ ನಂತರ ಅವರು ತಂಡಕ್ಕೆ ಮರಳಿದ್ದರು. ಆದರೆ ಬಯೋಬಬಲ್ ನಿಯಮದ ಪ್ರಕಾರ ಕ್ವಾರಂಟೈನ್ಗೆ ತೆರಳಿದ್ದ ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದರು‘ ಎಂದು ಬರೋಡಾ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಭುವನೇಶ್ವರದಲ್ಲಿ ಮಾರ್ಚ್ 3ರಿಂದ ನಡೆಯಲಿರುವ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಬರೋಡಾ ತಂಡವು ಹೈದರಾಬಾದ್ ಎದುರು ಆಡಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>