‘ಮೊದಲ ಹತ್ತು ಓವರ್ಗಳಲ್ಲಿ ಬೌಲರ್ಗಳು ಉತ್ತಮ ಸಾಮರ್ಥ್ಯ ತೋರಿದ್ದರು. ಹೀಗಾಗಿ ಪಂದ್ಯ ನಮ್ಮ ಹಿಡಿತದಲ್ಲಿತ್ತು. ನಂತರ ಧೋನಿ ಅಮೋಘ ಬ್ಯಾಟಿಂಗ್ ಮಾಡಿದರು. ಎದುರಾಳಿ ತಂಡದ ಬೌಲರ್ಗಳೂ ಚೆನ್ನಾಗಿ ದಾಳಿ ನಡೆಸಿದರು. ಸತತವಾಗಿ ವಿಕೆಟ್ ಪಡೆದು ನಮ್ಮ ಗೆಲುವಿನ ಕನಸಿಗೆ ತಣ್ಣೀರು ಸುರಿದರು. ಈ ಸೋಲಿನಿಂದ ತುಂಬಾ ಬೇಸರವಾಗಿದೆ’ ಎಂದು ರಾಜಸ್ಥಾನ್ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.