ತವರು ರಾಂಚಿಯ ತಮ್ಮ 43 ಎಕರೆ ತೋಟದ ಪೈಕಿ 10 ಎಕರೆಯಲ್ಲಿ ಸಾವಯವ ಹಣ್ಣು ಮತ್ತು ತರಕಾರಿ ಕೃಷಿ ಆರಂಭಿಸಿದ್ಧಾರೆ. ರಾಂಚಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಕೋಸು, ಟೊಮೆಟೋ, ಸ್ಟ್ರಾಬೆರಿ ಹೀಗೆ ಹತ್ತು ಹಲವು ಹಣ್ಣು, ತರಕಾರಿ ಬೆಳೆಯಲು ಶುರು ಮಾಡಿದ್ದಾರೆ. ಅಂದಹಾಗೆ, ಧೋನಿ ಇದೇ ತರಕಾರಿಗಳನ್ನು ದುಬೈ ಮಾರುಕಟ್ಟೆಯಲ್ಲಿ ಮಾರಲು ಸಿದ್ಧತೆ ನಡೆಸಿದ್ದಾರೆ ಎಂಬ ವರದಿ ಬಂದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಧೋನಿ ಬೆಳೆದ ತರಕಾರಿ ದುಬೈ ಪೇಟೆ ಪ್ರವೇಶಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ.